Advertisement

ಪಾಂಡವಪುರ: ಬಿಜೆಪಿಯಿಂದ ಅದ್ಧೂರಿ ಶೋಭಾಯಾತ್ರೆ

02:11 PM Apr 24, 2022 | Team Udayavani |

ಪಾಂಡವಪುರ: ಶ್ರೀರಾಮನವಮಿ ಉತ್ಸವ ಸಮಿತಿ, ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿಯಿಂದ ಪಟ್ಟಣದಲ್ಲಿ ಶನಿವಾರ ಶ್ರೀರಾಮರ ಪಟ್ಟಾಭಿಷೇಕ ಮಹೋತ್ಸವ ಮತ್ತು ಶೋಭಾಯಾತ್ರೆ ವಿಜೃಂಭಣೆ ಯಿಂದ ಜರುಗಿತು.

Advertisement

ಪಟ್ಟಣದ ಐದುದೀಪವೃತ್ತದಿಂದ ಹೊರಟ ಶೋಭಾಯಾತ್ರೆಗೆ ಬಿಜೆಪಿ ಮುಖಂಡರು ಚಾಲನೆ ನೀಡಿದರು. ಶ್ರೀರಾಮ ಉತ್ಸವಮೂರ್ತಿ ಇರುವಂತಹ ಶೋಭಯಾತ್ರೆಯೂ ವಿವಿಧ ಕಲಾತಂಡಗಳ ಜೊತೆಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಂತರ ಪಾಂಡವ ಕ್ರೀಡಾಂಗಣವನ್ನು ತಲುಪಿತು. ಯಾತ್ರೆಯಲ್ಲಿ ಡೊಳ್ಳು ಕುಣಿತ, ನಂದಿಕುಣಿತ ವಿಶೇಷವಾಗಿ ಚಂಡೇಮೇಳ, ವಾದ್ಯ ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆ ಯುದ್ದಕ್ಕೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕೇಸರಿ ಶಾಲು ಪ್ರದರ್ಶಿಸಿ ಜೈಶ್ರೀರಾಮ್‌ ಎಂಬ ಘೋಷಣೆ ಕೂಗಿದರು.

ಶೋಭಯಾತ್ರೆ ನೇತೃತ್ವವಹಿಸಿದ್ದ ಬಿಜೆಪಿ ಮುಖಂಡ ಡಾ.ಎನ್‌.ಎಸ್‌.ಇಂದ್ರೇಶ್‌ ಯುವಕರೊಂದಿಗೆ ವಾದ್ಯಮೇಳಗಳಿಗೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಪೊಲೀಸ್‌ ಭದ್ರತೆ: ಹಿಂದೂಪರ ಸಂಘಟನೆಗಳು ನಡೆಸಿದ ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಡಿವೈಎಸ್‌ಪಿ, ಸರ್ಕಲ್‌ ಇನ್ಸ್‌ ಪೆಕ್ಟರ್‌, ಸಬ್‌ಇನ್ಸ್‌ಪೆಕ್ಟರ್‌ ಸೇರಿ ಹಲವು ಪೊಲೀಸರು ಭದ್ರತೆ ನೀಡಿ ಅಹಿತಕರ ಘಟನೆಗಳು ಸಂಭವಿಸದಂತೆ ಶೋಭಾಯಾತ್ರೆ ಸುಗಮವಾಗಿ ನಡೆಸಿಕೊಟ್ಟರು. ಪಟ್ಟಣದ ಐದು ದೀಪವೃತ್ತದಿಂದ ಹೊರಟ ಮೆರವಣಿಗೆಯು ಎರಡೂವರೆ ಗಂಟೆಗೂ ಹೆಚ್ಚು ಕಾಲ ಪಟ್ಟಣದಲ್ಲಿ ಸಂಚರಿಸಿತು.

ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ: ಶೋಭಾಯಾತ್ರೆ ಹಿನ್ನೆಲೆಯಲ್ಲಿ ಪಟ್ಟಣದ ಹಲವೆಡೆ ಭಕ್ತರು, ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಲಾಯಿತು.

Advertisement

ರಂಗೋಲಿ, ವೇಷಭೂಷಣ ಸ್ಪರ್ಧೆ: ಶೋಭಾಯಾತ್ರೆ ಅಂಗವಾಗಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರಿಗಾಗಿ 122 ಬಾಕ್ಸ್‌ ಗಳನ್ನು ಆಯೋಜನೆ ಮಾಡಲಾಗಿತ್ತು. ಭಾಗವಹಿಸಿದ ಮಹಿಳೆಯರು ನಿಯೋಜನೆಗೊಂಡಿದ್ದ ಬಾಕ್ಸ್‌ ಒಳಗಡೆಯೇ ರಂಗೋಲಿ ಬಿಡಿಸಬೇಕಿತ್ತು. ರಂಗೋಲಿ ಬಿಡಿಸಲು 1 ಗಂಟೆ ಕಾಲಾವಕಾಶ ನೀಡಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ 122 ಮಹಿಳೆಯರು ಭಾಗವಹಿಸಿ ವಿವಿಧ ಬಗೆಯ ರಂಗೋಲಿಗಳನ್ನು ಬಿಡಿಸಿ ಗಮನ ಸೆಳೆದರು. ಅದೇ ವೇದಿಕೆಯಲ್ಲಿ ಮಕ್ಕಳ ವೇಷಭೂಷಣ ಸ್ಪರ್ಧೆಯೂ ನಡೆಯಿತು.

ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು, ಶ್ರೀರಾಮ, ಹನುಮ ಸೇರಿ ವಿವಿಧ ಬಗೆಯ ವೇಷಗಳನ್ನು ಧರಿಸಿ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು

Advertisement

Udayavani is now on Telegram. Click here to join our channel and stay updated with the latest news.

Next