Advertisement

ದಿಂಡಿ ಯಾತ್ರೆಯ ಭಕ್ತರರಿಗೆ ಪ್ರಸಾದ ಸೇವೆ ಸಲ್ಲಿಸಿ ಧನ್ಯತೆ ಮೆರೆದ ಮುಸ್ಲಿಂ ವ್ಯಕ್ತಿ

08:29 AM Oct 18, 2022 | Team Udayavani |

ಕುಷ್ಟಗಿ : ಮಹಾರಾಷ್ಟ್ರದ ಪಂಢರಾಪುರ ಶ್ರೀ ಪಂಡರೀನಾಥನ ದರ್ಶನಕ್ಕೆ ಹೊರಟ ಎಮ್ಮಿಗನೂರಿನ ಭಕ್ತರ ಕಾರ್ತಿಕ ದಿಂಡಿ ಯಾತ್ರೆಯನ್ನು ಕುಷ್ಟಗಿಯ ಮುಸ್ಲಿಂ ವ್ಯಕ್ತಿ ಬುಡನ್ ಸಾಬ್ ಅವರು ಪ್ರತಿ ವರ್ಷದಂತೆ ಈ ವರ್ಷವೂ ಯಾತ್ರಿಗಳನ್ನು ಸ್ವಾಗತಿಸಿ, ಪ್ರಸಾದ ಸೇವೆ ಸಲ್ಲಿಸಿ ಧನ್ಯತೆ ಮೆರೆದರು.

Advertisement

ಕುಷ್ಟಗಿಯ ಮಾರುತಿ ನಗರದ ನಿವಾಸಿ ಬುಡನ್‍ಸಾಬ್ ಕಳೆದ ಎಂಟು ವರ್ಷಗಳಿಂದ ಬಳ್ಳಾರಿ ಜಿಲ್ಲೆ ಎಮ್ಮಿಗನೂರಿನಿಂದ ಸಾಗುವ ಹರಿಭಕ್ತ ಫಂಡರಿ ಭಕ್ತರರಿಗೆ ಪ್ರಸಾದ ಸೇವೆ ಸಲ್ಲಿಸುವ ಮೂಲಕ ಯಾತ್ರಿಗಳಲ್ಲಿ ಪಂಢರಿನಾಥರನ್ನು ಕಾಣುತ್ತಿದ್ದಾರೆ.

ಕಳೆದ ಅ.10ರಂದು ಎಮ್ಮಿಗನೂರಿನಿಂದ ಸಾಗಿದ ದಿಂಡೀ, ಅ.17ರಂದು ಕುಷ್ಟಗಿ ತಲುಪಿದೆ. ಇನ್ನೂ 17 ದಿನಗಳಲ್ಲಿ ಮಹಾರಾಷ್ಟ್ರ ಪಂಢರಾಪುರಕ್ಕೆ ತಲುಪಲಿದೆ. ಪ್ರತಿ ವರ್ಷ ಆಷಾಡಾ ಏಕಾದಶಿ ಹಾಗೂ ಕಾರ್ತಿಕ ಮಾಸದಲ್ಲಿ ತಲಾ ಎರಡು ದಿಂಡೀ ಯಾತ್ರೆ ಕುಷ್ಟಗಿ ಮೂಲಕ ಪಂಢರಾಪುರಕ್ಕೆ ವಿಠ್ಠೋಬನ ದರ್ಶನಕ್ಕೆ ತೆರಳಿದ್ದು, ಈ ದಿಂಡೀ ಯಾತ್ರೆಗಳಿಗೆ ಅಳಿಲು ಸೇವೆಯಿಂದ ನನಗೆ ಒಳ್ಳೆಯದಾಗಿದೆ ಎಂದರು.

ಇದನ್ನೂ ಓದಿ : ದೇಶದಲ್ಲಿ ಬಡವರ ಸಂಖ್ಯೆ 41.5 ಕೋಟಿ ಇಳಿಕೆ: ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖ

Advertisement

Udayavani is now on Telegram. Click here to join our channel and stay updated with the latest news.

Next