Advertisement

ಪಂಚಮಸಾಲಿ ಸಮಾಜ 2ಎ ಸೇರ್ಪಡೆಗೆ ಆಗ್ರಹಿಸಿ ಮನವಿ

07:03 PM Feb 06, 2021 | Team Udayavani |

ಕಾಗವಾಡ: ತಾಲೂಕಿನ ಪಂಚಾಮಸಾಲಿ ಲಿಂಗಾಯತ ಸಮಾಜದ ಕಾರ್ಯಕರ್ತರು ಹಿಂದುಳಿದ 2ಎ ಪ್ರವರ್ಗಕ್ಕೆ ಸೇರ್ಪಡೆಗೆ ಆಗ್ರಹಿಸಿ ಗ್ರೇಡ್‌-2 ತಹಶೀಲ್ದಾರ್‌ ಅಣ್ಣಾ ಸಾಹೇಬ ಕೋರೆ ಅವರಿಗೆ ಮನವಿ ಸಲ್ಲಿಸಿದರು.

Advertisement

ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮಾಜವು ಬಹುಸಂಖ್ಯಾತ ಸಮಾಜವಾಗಿದೆ. ಈ ಸಮಾಜವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದೂಳಿದ ಸಮಾಜವಾಗಿದೆ. ಈ ಸಮಾಜದ ಮೂಲ ಕುಲ ಕಸುಬು ಕೃಷಿ. ಸಮಾಜವನ್ನು 3ಬಿ ದಿಂದ 2ಎ ಗೆ ವರ್ಗಾಯಿಸಲು ಆಗ್ರಹಿಸಿ ಸ್ವಾಮೀಜಿಗಳು ಪಾದಯಾತ್ರೆ ಮಾಡುತ್ತಿದ್ದಾರೆ.

ಇದನ್ನೂ ಓದಿ :ಮೀಸಲಾತಿ ವಿಚಾರದಲ್ಲಿ ವಾಸ್ತವ ಅರಿತು ಸರ್ಕಾರ ತೀರ್ಮಾನ ಕೈಗೊಳ್ಳಬೇಕು: ಕುಮಾರಸ್ವಾಮಿ

ಅವರಿಗೆ ಬೆಂಬಲ ಸೂಚಿಸಲು ಈ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪಂಚಮಸಾಲಿ ಲಿಂಗಾಯತ ಸಮಾಜದ ಮುಖಂಡ ಡಾ| ಸಿದ್ದಗೌಡ ಕಾಗೆ ಹೇಳಿದರು. ನ್ಯಾಯವಾದಿ ರಾಹುಲ್‌ ಕಟಿಗೇರಿ ಇವರು ಉಪ ತಹಶೀಲ್ದಾರ್‌ಗೆ ಸಮಾಜದ ಬೇಡಿಕೆ ವಿವರಿಸಿದರು. ಪ್ರತಿಭಟನಾ ರ್ಯಾಲಿಯಲ್ಲಿ ವಿದ್ಯಾವರ್ಧಕ ಶಿಕ್ಷಣ ಸಮಿತಿ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ನ್ಯಾಯವಾದಿ ಕಾಕಾ ಪಾಟೀಲ, ರಮೇಶ ಚೌಗುಲೆ, ಶಶಿಕಾಂತ ಗುಮಟೆ, ಚೇತನ ಪಾಟೀಲ, ಪ್ರಕಾಶ ಪಾಟೀಲ, ಬಿ.ಜೆ.ಪಾಟೀಲ, ಶಿವಾನಂದ ನವಿನಾಳೆ, ಉಮೇಶ ಪಾಟೀಲ, ಸಚೀನ ಚೌಗುಲೆ, ಶಿವಾನಂದ ಚೌಗುಲೆ, ಅಕ್ಷಯ ಕೋರೆ, ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next