Advertisement

Udupi ಶ್ರೀಕೃಷ್ಣ ಮಠದಲ್ಲಿ ಪಂಚ ರಥೋತ್ಸವ ಸಂಭ್ರಮ

11:23 PM Jan 22, 2024 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕಿದಿಯೂರು ಹೊಟೇಲ್‌ನ ನಾಗಮಂಡಲೋತ್ಸವದ ಪೂರ್ವ ಭಾವಿಯಾಗಿ, ಅಯೋಧ್ಯೆ ಶ್ರೀರಾಮನಪ್ರಾಣಪ್ರತಿಷ್ಠೆಯ ಅಂಗವಾಗಿ ಶ್ರೀ ರಾಮಕೃಷ್ಣರ ವಿಶೇಷ ಪಂಚ ರಥೋತ್ಸವ ಕಿದಿಯೂರು ಹೊಟೇಲ್‌ಪ್ರಾಯೋಕತ್ವದಲ್ಲಿ ಸೋಮವಾರ ನಡೆಯಿತು. ಬ್ರಹ್ಮರಥ, ಮಹಾಪೂಜಾ ರಥ, ಸ್ವರ್ಣರಥ, ನವರತ್ನರಥ ಹಾಗೂ ರಜತರಥ ಎಳೆಯಲಾಯಿತು.

Advertisement

ಶ್ರೀಕೃಷ್ಣ ಮಠಕ್ಕೆ ಹೂವಿನ ಅಲಂಕಾರ ಹಾಗೂಸುಡುಮದ್ದು ಪ್ರದರ್ಶನ ನಡೆಯಿತು.ಕಿದಿಯೂರು ಹೊಟೇಲ್‌ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ಯುವರಾಜ್‌ ಮಸ್ಕತ್‌, ಜಿತೇಶ್‌ ಬಿ. ಕಿದಿಯೂರು, ಪ್ರಿಯಾಂಕಾ ಜಿತೇಶ್‌, ಹಿರಿಯಣ್ಣ ಕಿದಿಯೂರು, ಆಶೀಶ್‌, ಹರಿಯಪ್ಪ ಕೋಟ್ಯಾನ್‌, ಸುಧಾಕರ್‌ ಮೆಂಡನ್‌, ಮಧುಸೂದನ್‌ ಕೆಮ್ಮಣ್ಣು, ದಿನಕರ್‌, ಶೋಭಾ ದಿನಕರ್‌, ವಿಲಾಸ್‌ ಕುಮಾರ್‌, ಜ್ಯೋತಿಷ ವಿದ್ವಾನ್‌ ಕಬಿಯಾಡಿ ಜಯರಾಮ್‌ ಆಚಾರ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next