Advertisement

Panambur ಮಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ ಆರೋಪಿಗಳ ಮಹಜರು, ಮುಂದುವರಿದ ತನಿಖೆ

08:07 PM Oct 18, 2024 | Team Udayavani |

ಪಣಂಬೂರು: ಉದ್ಯಮಿ, ಮಿಸ್ಬಾ ಶಿಕ್ಷಣ ಸಂಸ್ಥೆಗಳ ಚೇರ್‌ಮನ್‌, ಜಮಾತ್‌ ಮುಖಂಡ, ಉದ್ಯಮಿ ಮಮ್ತಾಜ್‌ ಅಲಿ ಅವರು ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಹನಿಟ್ರ್ಯಾಪ್‌ ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.

Advertisement

ಈ ಸಂಬಂಧ ಬಂಧಿತರಾಗಿರುವ ಆರೋಪಿಗಳನ್ನು ಮಹಜರು ಸಂಬಂಧ ಅವರ ಮನೆಗಳಲ್ಲಿ ತನಿಖೆ ನಡೆಸಲಾಯಿತು. ಕೃಷ್ಣಾಪುರದಲ್ಲಿ ಆರೋಪಿಗಳನ್ನು ಕರೆ ತರುವ ವೇಳೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಮಹಜರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸಲು ಹೆಚ್ಚುವರಿ ಕೆಎಸ್‌ಆರ್‌ಪಿ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಿದ್ದರು. ಕಾವೂರು ಪೊಲೀಸರ ತನಿಖೆಯ ಬಳಿಕ ಹನಿಟ್ರ್ಯಾಪ್‌ ಪ್ರಕರಣದ ತನಿಖೆಗಾಗಿ ಅವರನ್ನು ಸುರತ್ಕಲ್‌ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಅ. 6ರಂದು ಮಮ್ತಾಜ್‌ ಅಲಿ ಅವರು ಹಣಕ್ಕಾಗಿ ಕಿರುಕುಳ, ಬೆದರಿಕೆ ಕುರಿತಂತೆ ವಾಯ್ಸ ಮೆಸೇಜ್‌ ಕಳುಹಿಸಿರುವ ಹಿನ್ನೆಲೆಯಲ್ಲಿ ಪೊಲೀಸ್‌ ದೂರು ದಾಖಲಾದ ಹಿನ್ನಲೆಯಲ್ಲಿ ತನಿಖೆ ಚುರುಕುಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next