Advertisement

ಕಲ್ಯಾಣಪುರ ಮಿಲಾಗ್ರಿಸ್‌ ಕೆ‌ಥೆಡ್ರಲ್‌ ಗರಿಗಳ ರವಿವಾರ ಆಚರಣೆ

09:01 PM Apr 15, 2019 | Team Udayavani |

ಕಲ್ಯಾಣಪುರ: ಉಡುಪಿ ಧರ್ಮಪ್ರಾಂತ್ಯದ ಮಹಾ-ದೇವಾಲಯವಾಗಿರುವ (ಕೆಥೆಡ್ರಲ್‌) ಕಲ್ಯಾಣಪುರದ ಪವಾಡ ಮಾತೆಯ ದೇವಾಲಯದಲ್ಲಿ “ಗರಿಗಳ ರವಿವಾರ‌’ ಆಚರಣೆ ನಡೆಯಿತು.

Advertisement

ಇದು ಏಸುಕ್ರಿಸ್ತರು ವೈಭವದಿಂದ ಜೆರುಸಲೇಂ ನಗರ ಪ್ರವೇಶಿಸಿದ ಪುಣ್ಯಸ್ಮರಣೆಯ ಸಂಕೇತ. ಪವಿತ್ರ ವಾರದ ಆಚರಣೆಗೆ ತಯಾರಿಯಾಗಿ ಈ ಆಚರಣೆಯನ್ನು ಕ್ರೈಸ್ತ¤ ಅನುಯಾಯಿಗಳು ಪ್ರತೀ ವರ್ಷವೂ ಮಾಡುತ್ತಾರೆ.

ಕಲ್ಯಾಣಪುರ ಮಹಾದೇವಾಲಯದ ರೆ|ಫಾ| ಲಾರೆನ್ಸ್‌ ಡಿ’ಸೋಜಾ ಅವರು ಪ್ರಧಾನ ಗುರುಗಳಾಗಿ ಈ ಆಚರಣೆ ನೆರವೇರಿಸಿದರು. ಸಹಾಯಕ ಧರ್ಮಗುರು ರೆ|ಫಾ| ಕ್ಯಾನ್ಯೂಟ್‌ ನೊರೊನ್ಹಾ , ರೆ|ಫಾ| ಲ್ಯಾನ್ಸಿ ಫೆರ್ನಾಂಡಿಸ್‌ ಮತ್ತಿತರರು ಉಪಸ್ಥಿತರಿದ್ದರು.

ಈ ಮೆರವಣಿಗೆ ಮಿಲಾಗ್ರಿಸ್‌ ಆಂಗ್ಲಮಾಧ್ಯಮ ಶಾಲೆಯ ವಠಾರದಿಂದ ಆರಂಭಗೊಂಡು ದೇವಾಲಯದಲ್ಲಿ ಬಲಿಪೂಜೆಯ ಮುಖಾಂತರ ಕೊನೆಗೊಂಡಿತು. ನೂರಾರು ಭಕ್ತರು ಮೆರವಣಿಗೆ, ಬಲಿಪೂಜೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next