Advertisement

ಷರೀಫ್ಗೆ ಪಾಕ್‌ ಸರಕಾರ ತರಾಟೆ

06:00 AM May 15, 2018 | |

ಇಸ್ಲಾಮಾಬಾದ್‌: ಪಾಕಿಸ್ಥಾನವೇ 2011ರಲ್ಲಿ ಮುಂಬಯಿ ದಾಳಿ ನಡೆಸಲು ಉಗ್ರರನ್ನು ಕಳುಹಿಸಿತ್ತು ಎಂಬ ಮಾಜಿ ಪ್ರಧಾನಿ ನವಾಜ್‌ ಷರೀಫ್ರ ಹೇಳಿಕೆಯನ್ನು ಪಾಕ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಪ್ರಬಲವಾಗಿ ಖಂಡಿಸಿದೆ. ಅವರು ಆಧಾರ ರಹಿತ, ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ ಎಂದು ಹೇಳಿದೆ.

Advertisement

ಜತೆಗೆ, ಷರೀಫ್ ಹೇಳಿಕೆ ಬಗ್ಗೆ ಎನ್‌ಎಸ್‌ಸಿ ಸಭೆಯಲ್ಲಿ ಪರಿಶೀಲಿಸಲಾಗಿದೆ. ಮುಂಬೈ ದಾಳಿಗೆ ಸಂಬಂಧಿಸಿದ ವಿಚಾರಣೆ ವಿಳಂಬಕ್ಕೆ ಭಾರತವೇ ಕಾರಣ ಹೊರತು ಪಾಕಿಸ್ಥಾನ ಅಲ್ಲ ಎಂದು ಪ್ರಕಟಣೆಯಲ್ಲಿ ಪ್ರಸ್ತಾಪಿಸಲಾಗಿದೆ. ಭಾರತ ಅತ್ಯಂತ ತರಾತುರಿಯಲ್ಲಿ ಉಗ್ರ ಅಜ್ಮಲ್‌ ಕಸಬ್‌ನನ್ನು ಗಲ್ಲಿಗೇರಿಸಿತು ಎಂದೂ ಹೇಳಿದೆ.

ಷರೀಫ್ ವಿರುದ್ಧ ದೇಶದ್ರೋಹ ಆರೋಪ ಹೊರಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಪತ್ರಿಕೆಗೆ ಷರೀಫ್ ನೀಡಿದ ಸಂದರ್ಶನವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಪಾಕ್‌ ಪ್ರಧಾನಿ ಷಹೀದ್‌ ಕಖಾನ್‌ ಅಬ್ಟಾಸಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next