Advertisement

ಪಾಕಿಸ್ಥಾನ ನೈಜ ಸ್ಥಿತಿಯನ್ನು ಅರಿಯಲಿ: ಭಾರತ

09:20 AM Aug 10, 2019 | Team Udayavani |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನ ನೈಜ ಸ್ಥಿತಿಯನ್ನು ಅರಿಯಬೇಕು. ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದನ್ನು ಕೈಬಿಡಬೇಕು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

Advertisement

370 ರದ್ದು ವಿಚಾರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಖಾತೆ ವಕ್ತಾರ ರವೀಶ್‌ ಕುಮಾರ್‌ ಅವರು ವಿಧಿ ರದ್ದುಪಡಿಸುವ ದಿಲ್ಲಿ ನಿರ್ಧಾರದ ಬಗ್ಗೆ ಪಾಕಿಸ್ಥಾನ ಯಾವುದೇ ಒತ್ತಡ ಹೇರಬೇಕಾದ್ದಿಲ್ಲ. ಈ ಕುರಿತಂತೆ ಭಾರತ ಈಗಾಗಲೇ ವಿವಿಧ ದೇಶಗಳಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ವಿಧಿ ರದ್ದುಗೊಳಿಸುವ ತೀರ್ಮಾನಕ್ಕೆ ಬದ್ಧವಾಗಿದ್ದು, ಅಭಿವೃದ್ಧಿ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಪಾಕಿಸ್ಥಾನಕ್ಕೆ ಏನೂ ಇಲ್ಲ. ಪಾಕಿಸ್ಥಾನ ರಾಯಭಾರಿಯನ್ನು ವಾಪಸ್‌ ಕಳಿಸುವ ಕ್ರಮದ ಮೂಲಕ ಜಗತ್ತಿಗೆ ಏನೋ ಆಗಬಾರದ್ದು ಆಗಿ ಹೋಗಿದೆ ಎಂಬುದನ್ನು ಬಿಂಬಿಸಲು ವೃಥಾ ಯತ್ನಿಸುತ್ತಿದೆ. ಈ ಉದ್ದೇಶದ ಹಿಂದೆ ಯಾವುದೇ ಒಳಿತಿಲ್ಲ ಎಂದು ರವೀಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next