Advertisement

ಪಾಕಿಸ್ತಾನ; ಧರ್ಮನಿಂದನೆ ಆರೋಪ, ಲಂಕಾ ಪ್ರಜೆಗೆ ಬೆಂಕಿ ಹಚ್ಚಿ ಸಜೀವ ದಹನ

12:06 PM Dec 04, 2021 | Team Udayavani |

ಲಾಹೋರ್:ಧರ್ಮನಿಂದನೆ ಮಾಡಿದ್ದಾರೆಂಬ ಆರೋಪದಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯ ಶ್ರೀಲಂಕಾ ಮೂಲದ ಮ್ಯಾನೇಜರ್ ವೊಬ್ಬರ ಮೇಲೆ ಗುಂಪೊಂದು ದಾಳಿ ನಡೆಸಿ, ಸಜೀವ ದಹನ ಮಾಡಿದ ಅಮಾನವೀಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಬೆಂಗಳೂರಿನಲ್ಲಿ ಕ‌ಠಿಣ ನಿರ್ಬಂಧಕ್ಕೆ ಚಿಂತನೆ; ನಿತ್ಯವೂ 30 ಸಾವಿರ ಕೊರೊನಾ ಟೆಸ್ಟ್ 

ಲಾಹೋರ್ ನಿಂದ 100 ಕಿಲೋ ಮೀಟರ್ ದೂರದಲ್ಲಿರುವ ಸಿಯಾಲ್ ಕೋಟ್ ಜಿಲ್ಲೆಯಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಿಯಾಂತಾ ಕುಮಾರ (40) ಎಂಬವರನ್ನು ಸಜೀವ ದಹನ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಇಸ್ಲಾಮಿಸ್ಟ್ ಪಕ್ಷದ ಬೆಂಬಲಿಗರೂ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಕುಮಾರ ಅವರು ಇತ್ತೀಚೆಗೆ ತೆಹ್ರೀಕ್ ಇ ಲಬ್ಲೈಕ್ ಪಾಕಿಸ್ತಾನ್ ಸಂಘಟನೆಯ ಕರಪತ್ರವೊಂದನ್ನು ಹರಿದು ಕಸದ ಬುಟ್ಟಿಗೆ ಹಾಕಿದ್ದರು. ಆ ಕರಪತ್ರದಲ್ಲಿ ಕುರಾನ್ ನ ಸಾಲುಗಳು ಇದ್ದ ಕಾರಣ, ಪ್ರಿಯಾಂತಾ ಧರ್ಮನಿಂದನೆ ಮಾಡಿದ್ದಾರೆಂದು ಆರೋಪಿಸಿ ಅವರನ್ನು ಹತ್ಯೆಗೈದು ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ಧರ್ಮನಿಂದನೆ ಮಾಡಿರುವ ಆರೋಪ ಕೇಳಿ ಬಂದ ನಂತರ ಫ್ಯಾಕ್ಟರಿಯ ಹೊರಗೆ ನೂರಾರು ಮಂದಿ ಗುಂಪುಗೂಡಿದ್ದರು. ಇವರೆಲ್ಲರೂ ಟಿಎಲ್ ಪಿ ಬೆಂಬಲಿಗರು ಎಂದು ಹೇಳಲಾಗಿದೆ. ಆಕ್ರೋಶಗೊಂಡ ಗುಂಪು ಫ್ಯಾಕ್ಟರಿಯೊಳಗೆ ನುಗ್ಗಿ ಕುಮಾರ ಅವರನ್ನು ಹೊರಗೆ ಎಳೆದು ತಂದು ಥಳಿಸಿ, ಬೆಂಕಿ ಹಚ್ಚಿರುವುದಾಗಿ ವರದಿ ತಿಳಿಸಿದೆ.

Advertisement

ಘಟನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ಫೂಟೇಜ್ ಪರಿಶೀಲಿಸಿ ಈಗಾಗಲೇ ಶಂಕಿತ ನೂರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೊಂದು ತಲೆತಗ್ಗಿಸುವ ಘಟನೆಯಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next