Advertisement

ಭಾರತದ ಜತೆಗೆ ವ್ಯಾಪಾರ ನಿಲ್ಲಿಸಿದ್ದಕ್ಕೆ ಟೊಮೆಟೊಗೆ 300 ರೂ. ಆಯ್ತು!

09:50 AM Dec 05, 2019 | Team Udayavani |

ಇಸ್ಲಾಮಾಬಾದ್‌: “ಭಾರತದ ಜತೆಗೆ ವ್ಯಾಪಾರ ಸಂಬಂಧ ಕಡಿದುಕೊಂಡದ್ದೇ ನಮಗೆ ಮುಳುವಾಯಿತು. ಅವರ ಜತೆಗೆ ಉತ್ತಮ ಸಂಬಂಧ ಇದ್ದಿದ್ದರೆ ಪಾಕಿಸ್ತಾನದಲ್ಲಿ ಪ್ರತಿ ಕೆಜಿ ಟೊಮೆಟೊಗೆ 300 ರೂ. ಆಗುತ್ತಿರಲಿಲ್ಲ’

Advertisement

– ಹೀಗೆಂದು ಹೇಳಿಕೊಂಡದ್ದು ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಸಚಿವ ಹಮದ್‌ ಅಝರ್‌. ಭಾರತದ ಜತೆಗೆ ವ್ಯಾಪಾರ ಬಾಂಧವ್ಯ ಕಡಿದುಕೊಂಡ ಬಳಿಕ ಅಲ್ಲಿನ ಸ್ಥಿತಿ ಶೋಚನೀಯವಾಗಿದೆ. ಅಗತ್ಯ ವಸ್ತುಗಳ ದರ ಗಗನ ಮುಖೀಯಾಗಿದ್ದು, ಜನ ಜೀವನ ಶೋಚನೀಯವಾಗಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಇತರ ಭಾಗಗಳಲ್ಲಿ ದುಷ್ಕೃತ್ಯಕ್ಕೆ ಕುಮ್ಮಕ್ಕು ನೀಡುವ ಪಾಕ್‌ಗೆ ಕೊನೆಗೂ ಭಾರತದ ಅನಿವಾರ್ಯತೆ ಅರ್ಥವಾದಂತೆ ಕಾಣುತ್ತದೆ.

ಪ್ರಧಾನಿ ಇಮ್ರಾನ್‌ ಖಾನ್‌ ಅವರ ಆರ್ಥಿಕ ಸಲಹಾ ಸಮಿತಿಯ ಜತೆಗೆ ಸಭೆ ನಡೆಸಿದ ಬಳಿಕ ಅವರು ಭಾರತದ ಜತೆಗೆ ಉತ್ತಮ ವ್ಯಾಪಾರ ಬಾಂಧವ್ಯ ಹೊಂದಿದ್ದರೆ ಹೀಗಾಗುತ್ತಿರಲಿಲ್ಲ ಎಂದರು. ಪಾಕಿಸ್ತಾನಕ್ಕೆ ಈಗಾಗಲೇ ಅಮೆರಿಕ ನೆರವು ನೀಡುವುದನ್ನು ನಿಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next