Advertisement

ಭಾರತೀಯ ಸೇನೆ ಹೊಡೆತಕ್ಕೆ ಕಂಗಾಲು; ಬಿಳಿ ಬಾವುಟ ತೋರಿಸಿ ಸೈನಿಕರ ಶವ ಎತ್ತಿಕೊಂಡು ಹೋದ Pak

10:09 AM Sep 15, 2019 | Nagendra Trasi |

ಜಮ್ಮು-ಕಾಶ್ಮೀರ: ಗಡಿ ನಿಯಂತ್ರಣ ರೇಖೆ ಸಮೀಪ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದ ಪಾಕಿಸ್ತಾನಿ ಸೇನೆ ವಿರುದ್ಧ ಭಾರತೀಯ ಸೇನೆ ಪ್ರತಿದಾಳಿ ನಡೆಸಿದ ಪರಿಣಾಮ ಇಬ್ಬರು ಪಾಕ್ ಸೈನಿಕರು ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯ ದಾಳಿಗೆ ಬೆದರಿದ ಪಾಕ್ ಸೈನಿಕರು ಬಿಳಿ ಬಾವುಟ ತೋರಿಸಿ ಸೈನಿಕರ ಶವವನ್ನು ತೆಗೆದುಕೊಂಡು ಹೋದ ಘಟನೆ ವರದಿಯಾಗಿದೆ.

Advertisement

ಎಎನ್ಐ ವರದಿ ಪ್ರಕಾರ ಸೆಪ್ಟೆಂಬರ್ 10-11ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ಹಾಜಿಪುರ್ ಸೆಕ್ಟರ್ ನಲ್ಲಿ ಸಿಪಾಯಿ ಗುಲಾಮ್ ರಸೂಲ್ ಭಾರತೀಯ ಸೇನಾಪಡೆಯ ದಾಳಿಗೆ ಬಲಿಯಾಗಿದ್ದ.

ಅಲ್ಲದೇ ಪಾಕಿಸ್ತಾನಿ ಪಂಜಾಬಿ ಮುಸ್ಲಿಮ್ ಸೈನಿಕನೊಬ್ಬ ಸಾವನ್ನಪ್ಪಿದ್ದ. ಹೀಗೆ ಎರಡು ದಿನಗಳ ಕಾಲ ಭಾರತೀಯ ಸೇನೆ ಪ್ರತಿದಾಳಿ ನಡೆಸುತ್ತಿದ್ದ ಪರಿಣಾಮ ಪಾಕ್ ಸೈನಿಕರ ಶವವನ್ನು ಹಾಗೆಯೇ ಬಿಟ್ಟುಬಿಟ್ಟಿದ್ದರು ಎಂದು ವರದಿ ವಿವರಿಸಿದೆ. ಸೆಪ್ಟೆಂಬರ್ 13ರಂದು ಪಾಕಿಸ್ತಾನದ ಸೈನಿಕರು ಗನ್ ಕೆಳಗಿಟ್ಟು ಬಿಳಿ ಬಾವುಟ ತೋರಿಸಿ ಸೈನಿಕರ ಶವ ತೆಗೆದುಕೊಂಡು ಹೋಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next