Advertisement

ಜೋಡಿ ಕೊಲೆ: RJD ಮಾಜಿ ಶಾಸಕ ದೋಷಿ

07:47 PM Aug 18, 2023 | Team Udayavani |

ಪಟನಾ: 28 ವರ್ಷಗಳ ಹಿಂದಿನ ಜೋಡಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಬಿಹಾರದ ಮಾಜಿ ರಾಜಕಾರಣಿ, ಆರ್‌ಜೆಡಿ ಪಕ್ಷದ ಮಾಜಿ ಶಾಸಕ ಪ್ರಭುನಾಥ್‌ ಸಿಂಗ್‌ ಅವರನ್ನು ಸುಪ್ರೀಂ ಕೋರ್ಟ್‌ ಗುರುವಾರ ದೋಷಿ ಎಂದು ಪರಿಗಣಿಸಿದೆ. ಅಲ್ಲದೇ ಈ ಹಿಂದೆ ಇದೇ ಪ್ರಕರಣ ಸಂಬಂಧಿಸಿದಂತೆ ಸಿಂಗ್‌ ಅವರನ್ನು ಖುಲಾಸೆಗೊಳಿಸಿದ್ದ ಪಾಟ್ನಾ ಹೈಕೋರ್ಟ್‌ ತೀರ್ಪನ್ನೂ ರದ್ದುಗೊಳಿಸಿದೆ.

Advertisement

1995ರ ಆಗಸ್ಟ್‌ 23ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿಂಗ್‌ ಅವರು ಹೇಳಿದಂತೆ ಮತ ಚಲಾಯಿಸಲಿಲ್ಲವೆಂಬ ಕಾರಣಕ್ಕೆ ರಾಜೇಂದ್ರ ರೈ ಮತ್ತು ದರೋಗ ರೈ ಎಂಬ ಇಬ್ಬರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. 2008ರಲ್ಲಿ ಪ್ರಕರಣ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆ ಇದ್ದ ಕಾರಣ ಹೈಕೋರ್ಟ್‌ ಸಿಂಗ್‌ ಅವರನ್ನು ಖುಲಾಸೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ಕುಟುಂಬ ಸುಪ್ರೀಂ ಮೆಟ್ಟಿಲೇರಿದ್ದು, ಇದೀಗ ಸರ್ವೋಚ್ಚ ನ್ಯಾಯಾಲಯವು ಸಿಂಗ್‌ರನ್ನು ಅಪರಾಧಿ ಎಂದು ಘೋಷಿಸಿದೆ. ಮುಂದಿನ ತಿಂಗಳು ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next