Advertisement

ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿ: ವಾಹನ ಸವಾರರೇ ಎಚ್ಚರ!

12:16 AM Jun 17, 2019 | Team Udayavani |

ಪಳ್ಳಿ: ಮಳೆಗಾಲ ಆರಂಭ ವಾಗುತ್ತಿದ್ದಂತೆ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗಿದೆ.

Advertisement

ಖಾಸಗಿ ಮೊಬೈಲ್‌ ಕಂಪೆನಿಯೊಂದು ಪಡುಬಿದ್ರಿ- ಕಾರ್ಕಳ ಹೆದ್ದಾರಿಯ ರಸ್ತೆಯ ಬದಿಯಲ್ಲೇ ಕೇಬಲ್‌ ಅಳವಡಿಸಲು ತೋಡಿದ ಹೊಂಡವನ್ನು ಸಮರ್ಪಕವಾಗಿ ಮುಚ್ಚದ ಕಾರಣ ಅಪಾಯಕಾರಿಯಾಗಿದೆ.

ಅಪ್ಪಿ ತಪ್ಪಿ ವಾಹನ ಸವಾರರು ರಸ್ತೆಯಿಂದ ಕೆಳಕ್ಕೆ ಇಳಿಸಿದರೆ ಮತ್ತೆ ಮೇಲೆ ಬರುವುದು ಕಷ್ಟ. ವಾಹನ ಅಲ್ಲೇ ಹೂತು ಹೋಗುವುದರ ಜತೆಗೆ ಬೀಳುವ ಅಪಾಯವೂ ಇದೆ.

ಬಿಎಸ್‌ಎನ್‌ಎಲ್‌ ಸಂಪರ್ಕ ಕಡಿತ
ಕೇಬಲ್‌ ಅಳವಡಿಕೆಗೆ ರಸ್ತೆ ಬದಿ ಅಗೆದ ಪರಿಣಾಮ ಬಿಎಸ್‌ಎನ್‌ಎಲ್‌
ನೆಟ್‌ವರ್ಕ್‌ಗೆ ಸಮಸ್ಯೆಯಾಗಿದೆ. ಗ್ರಾಮಾಂತರ ಪ್ರದೇಶದ ಜನರು,
ಗ್ರಾಮ ಪಂಚಾಯತ್‌ಗಳಲ್ಲಿ ಸಾರ್ವಜನಿಕ ಸೇವೆಗೆ ತೊಂದರೆ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next