Advertisement

Padubidri: ಕಟ್ಟಡ ಕಾರ್ಮಿಕ ಸಾವು

11:59 PM Feb 18, 2024 | Team Udayavani |

ಪಡುಬಿದ್ರಿ: ಎಲ್ಲೂರು ಗ್ರಾಮದ ಕೊಳಚೂರುನಲ್ಲಿ ರವಿವಾರ ಮಧ್ಯಾಹ್ನ ನಿರ್ಮಾಣ ಹಂತದ ಕೈಗಾರಿಕಾ ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದು ಝಾರ್ಖಂಡ್‌ ಮೂಲದ ಆಶೀಷ್‌ ಎಂಬ ಕಾರ್ಮಿಕ ಸಾವಿಗೀಡಾಗಿದ್ದಾರೆ.

Advertisement

ಬೆಳಗ್ಗಿನಿಂದಲೇ ಅಲ್ಲಿ ಸೆಂಟ್ರಿಂಗ್‌ ಶೀಟುಗಳನ್ನು ಕೆಳಗಿಳಿಸುವ ಕಾರ್ಯವು ನಡೆದಿತ್ತು. ಆಶೀಷ್‌ ಶೀಟನ್ನು ಇಳಿಸುವ ವೇಳೆ ಅದರ ಭಾರಕ್ಕೆ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದರು. ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾದರೂ ಆ ಗಲೇ ಆಶೀಷ್‌ ಮೃತಪಟ್ಟಿದ್ದರು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next