Advertisement
ರಾಜ್ಯ ಹೆದ್ದಾರಿ ಸಂಖ್ಯೆ 1ರ ಪಕ್ಕ ಹೆದ್ದಾರಿಗೆ ಹೊಂದಿ ಕೊಂಡು ಒಳಚರಂಡಿ ನಿರ್ಮಾಣದ ಕಾಮಗಾರಿ ಯನ್ನು ನಡೆಸಿರುವ ಹೆದ್ದಾರಿ ಗುತ್ತಿಗೆದಾರ ನವಯುಗ ಕಂಪೆನಿಯು ರಾಜ್ಯ ಹೆದ್ದಾರಿಗೆ ಒಂದಿನಿತೂ ಡಾಮರು ಹಾಕಲು ತಯಾರಿಲ್ಲ. ಇಲಾಖಾ ಹೊಂದಾಣಿಕೆಯಿಂದ ಇದು ಅಸಾಧ್ಯವಾಗಿದ್ದು ಒಳಚರಂಡಿ ಪಕ್ಕ ಗುಂಡಿ ನಿರ್ಮಾಣವಾಗಿದೆ. ವಾಹನಗಳೂ ಇಲ್ಲಿ ನಿಧಾನ ಗತಿಯಿಂದಲೇ ಸಾಗಬೇಕಾಗಿದೆ. ಹೆದ್ದಾರಿ ವಾಹನ ಸಂಚಾರವನ್ನು ಯಾರೂ ತಡೆಯುವಂತಿಲ್ಲ. ಇದರ ನಡುವೆ ಉಡುಪಿ ಬಸ್ ಹಿಡಿಯುವ ಧಾವಂತದಲ್ಲಿನ ಜನತೆ ಎದ್ದೂ ಬಿದ್ದು, ಮೈಯೆಲ್ಲ ಕಣ್ಣಾಗಿಸಿ ಉಡುಪಿ ಬಸ್ ನಿಲ್ದಾಣಕ್ಕೆ ಬರಬೇಕಿದೆ.
Related Articles
Advertisement
ಹೆದ್ದಾರಿ ಕಾಮಗಾರಿಯ ಯೋಜನಾ ವರದಿ ಯಲ್ಲಿ ನಮೂದಿಸಲಾಗಿದ್ದ ಕಾಮಗಾರಿಯನ್ನು ಬದಲಾವಣೆಗೊಳಿಸಿ ಅವೈಜ್ಞಾನಿಕವಾಗಿ ಪಡುಬಿದ್ರಿಯ ಹೆದ್ದಾರಿ ಕಾಮಗಾರಿಗಳು ನಡೆದಿರುವುದರಿಂದ ಈ ಎಲ್ಲ ಅಚಾತುರ್ಯ ಗಳಾಗಿವೆ. ಪಡುಬಿದ್ರಿ ಪೊಲೀಸ್ ಠಾಣಾ ಸಿಬಂದಿ, ಗೃಹರಕ್ಷಕ ದಳದವರ ಸಹಕಾರವು ಸಂಚಾರದ ನಿರ್ವಹಣೆಗಾಗಿ ಬಹಳಷ್ಟು ಇದ್ದರೂ ಕೆಲವೊಮ್ಮೆ ಅವರನ್ನೇ ನಿರ್ಲಕ್ಷಿಸಿ ವಾಹನ ಸವಾರರು ‘ಕ್ಯಾರೇ ಇಲ್ಲದಂತೆ’ ಸಾಗುತ್ತಾರೆ. ಇದರ ಸಂಪೂರ್ಣ ತೊಂದರೆಗಳನ್ನು ಇಲ್ಲಿನ ಪ್ರಯಾಣಿಕರು, ಇಲ್ಲಿನ ಪೇಟೆ ವ್ಯವಹಾರಗಳಿಗೆ ಧಾವಿಸುವ ಗ್ರಾಹಕರು ಮತ್ತು ಹತ್ತಿರದ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು ಅನುಭವಿಸುವಂತಾಗಿದೆ.
ಸಭೆ ಕರೆದು ಅಂತಿಮ ರೂಪ
ಪಡುಬಿದ್ರಿಯ ಪ್ರಮುಖ ಜಂಕ್ಷನ್ ಸಮಸ್ಯೆಯ ಪರಿಹಾರಕ್ಕೆ ಎರಡನೇ ಬಾರಿ ಈ ತಿಂಗಳೊಳಗಾಗಿ ರಿಕ್ಷಾ, ಕಾರು ಹಾಗೂ ಟೆಂಪೋ ಚಾಲಕ ಮಾಲಕರ ಸಭೆಯನ್ನು ಕರೆಯಲಾಗುವುದು. ಈ ಸಭೆಯಲ್ಲಿ ಸೂಕ್ತವಾದ ಅಂತಿಮ ರೂಪುರೇಖೆಯನ್ನು ನೀಡಿ ಎಲ್ಲರಿಗೂ ಸೂಕ್ತ ತಂಗುದಾಣದ ವ್ಯವಸ್ಥೆ, ಬಸ್ ನಿಲ್ದಾಣಗಳಲ್ಲೇ ಮಂಗಳೂರು, ಉಡುಪಿ ಮತ್ತು ಕಾರ್ಕಳ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಆಗ ತನ್ನಿಂತಾನೇ ಪಡುಬಿದ್ರಿಯ ಜಂಕ್ಷನ್ ಸಮಸ್ಯೆ ನೀಗಲಿದೆ. –ರವಿ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ
ಹೆದ್ದಾರಿಗೆ ಸಿಗ್ನಲ್ ಲೈಟ್ ಕಷ್ಟ
ಪಡುಬಿದ್ರಿಯಲ್ಲಿ ಹೆದ್ದಾರಿಗೆ ಸಿಗ್ನಲ್ ಲೈಟ್ ಅಳವಡಿಕೆಗೆ ಕಷ್ಟವಾಗಬಹುದು. ರಾಜ್ಯ ಹೆದ್ದಾರಿಗಾದರೂ ಅಳವಡಿಕೆ ಸಾಧ್ಯವಿದೆ. ಆದರೆ ಇಲ್ಲಿನ ಸರ್ವೀಸ್ ರಸ್ತೆ ಕಾಮಗಾರಿಯು ಮುಗಿದು ಬಸ್ ಸಂಚಾರ ಸರ್ವೀಸ್ ರಸ್ತೆಯಲ್ಲಿ ಸಾಗುವಂತಾದಾಗ ಜಂಕ್ಷನ್ ಸಮಸ್ಯೆಯೂ ಪರಿಹಾರವಾಗಬಹುದು. –ಅಶೋಕ್ ಕುಮಾರ್ ಪಡುಬಿದ್ರಿ ಪಿಎಸ್ಐ
ಆರಾಮ