Advertisement

ಪದ್ಮಾವತ್‌: ಶಾಲಾ ಬಸ್‌ ದಾಳಿಕೋರರನ್ನು ಖಂಡಿಸಿ: ಕೇಜ್ರಿ ಕರೆ

03:28 PM Jan 25, 2018 | Team Udayavani |

ಹೊಸದಿಲ್ಲಿ : ಪದ್ಮಾವತ್‌ ಚಿತ್ರ ಪ್ರತಿಭಟನಕಾರರು ಗುರುಗ್ರಾಮದಲ್ಲಿ  ಶಾಲಾ ಮಕ್ಕಳ ಬಸ್ಸಿನ ಮೇಲೆ ದಾಳಿ ನಡೆಸಿರುವುದನ್ನು ಅತ್ಯುಗ್ರವಾಗಿ ಖಂಡಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಈ ರೀತಿಯ ದಾಳಿಗಳ ಬಗ್ಗೆ ಯಾರೂ ಮೂಕರಾಗಿ ಉಳಿಯಬಾರದು, ತೀವ್ರವಾಗಿ ಖಂಡಿಸಬೇಕು ಎಂದು ಹೇಳಿದ್ದಾರೆ.

Advertisement

“ನಾನು ಎಲ್ಲರಲ್ಲೂ ವಿನಂತಿ ಮಾಡುತ್ತೇನೆ; ನಾವಿನ್ನು ಮೂಕರಾಗಿರಲು ಸಾಧ್ಯವಿಲ್ಲ; ಈ ದಾಳಿಕೋರರು ಮುಸ್ಲಿಮರನ್ನು ಕೊಂದವರು, ದಲಿತರನ್ನು ಸಜೀವ ದಹನ ಮಾಡಿದವರು; ಚಚ್ಚಿ ಕೊಂದವರು; ಇವತ್ತು ಅವರು ನಮ್ಮ ಮಕ್ಕಳ ಮೇಲೆ ಕಲ್ಲು ಹೊಡೆಯುತ್ತಿದ್ದಾರೆ; ನಮ್ಮ ಮನೆಗೇ ನುಗ್ಗಿ ಬಂದು ನಮ್ಮ ಮೇಲೆ ದಾಳಿಗೆ ಮುಂದಾಗಿದ್ದಾರೆ; ಹಾಗಿರುವಾಗ ಇನ್ನು ಯಾರೂ ಮೂಕರಾಗಿರಬಾರದು; ಇಂತಹ ದಾಳಿಗಳನ್ನು ಖಂಡಿಸಿ ಮಾತನಾಡಲೇಬೇಕು’ ಎಂದು ಕೇಜ್ರಿವಾಲ್‌ ಗುಡುಗಿದರು. 

ಜನರು ವಿಭಜಕ ಶಕ್ತಿಗಳ ವಿರುದ್ಧ ಸೆಟೆದೆದ್ದು ಮಾತನಾಡಬೇಕು ಎಂದು ಕೇಜ್ರಿವಾಲ ದಿಲ್ಲಿಯ ಉತ್ತರ ಛತ್ರಶಾಲಾ ಸ್ಟೇಡಿಯಂ ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next