Advertisement

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

01:05 AM Jul 07, 2024 | Team Udayavani |

ಮಂಗಳೂರು: ರಾಹುಲ್‌ ಗಾಂಧಿ ಬಗ್ಗೆ ಪೇಜಾವರ ಶ್ರೀಗಳು ಟೀಕಿಸಿರುವುದು ಖಂಡನೀಯ. ಧಾರ್ಮಿಕ ರಂಗದಲ್ಲಿರುವವರು ರಾಜ ಕೀಯಕ್ಕೆ ಮೂಗು ತೂರಿಸಿರುವುದು ಸಮರ್ಥನೀಯವಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಪೂಜಾರಿ ಹೇಳಿದ್ದಾರೆ.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜವನ್ನು ಬಿಜೆಪಿಗೆ ಒತ್ತೆ ಇಟ್ಟಿಲ್ಲ. ಕಳೆದಚುನಾವಣೆಯಲ್ಲಿ 3 ಲಕ್ಷಕ್ಕೂ ಅಧಿಕ ಹಿಂದೂಗಳು ನನಗೆ ಮತ ಚಲಾಯಿಸಿ ದ್ದಾರೆ. ಸ್ವಾಮೀಜಿಯವರ ಬಗ್ಗೆ ನಮಗೆ ಗೌರವವಿದೆ. ಆದರೆ ಅವರು ತಾರತಮ್ಯ ಮಾಡುವುದು ಸರಿಯಲ್ಲ ಎಂದರು. ಕೆಲವು ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿರುವ ಅಯೋಧ್ಯೆಯ ರಾಮ ಮಂದಿರ ಈಗಲೇ ಸೋರುತ್ತಿದೆ. ಮಂದಿರದ ಕಾಮಗಾರಿಯನ್ನು ತರಾ ತುರಿಯಲ್ಲಿ ನಡೆಸುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದಾರೆ. ನೀಟ್‌ನಲ್ಲಿ ಅನ್ಯಾಯವಾದಾಗ ಎಬಿವಿಪಿ ಯಾಕೆ ಸುಮ್ಮನಿತ್ತು ಎಂದರು. ಕೆಪಿಸಿಸಿ ರಾಜ್ಯ ವಕ್ತಾರ ಎಂ.ಜಿ. ಹೆಗ್ಡೆ, ನಗರ ಬ್ಲಾಕ್‌ ಅಧ್ಯಕ್ಷ ಪ್ರಕಾಶ್‌ ಸಾಲ್ಯಾನ್‌, ಪ್ರಮುಖರಾದ ಮನೋರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next