Advertisement

CBFC ಗೆ ಬಿಗಿ ಭದ್ರತೆ; ಕರ್ಣಿ ಸೇನೆ ಪ್ರತಿಭಟನಕಾರರು ವಶಕ್ಕೆ

11:37 AM Jan 12, 2018 | udayavani editorial |

ಮುಂಬಯಿ : ಬಾಲಿವುಡ್‌ ಚಿತ್ರ ನಿರ್ಮಾಪಕ, ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಅವರ ವಿವಾದಿತ ಪದ್ಮಾವತ್‌ (ಈ ಮೊದಲಿನ ಹೆಸರು ಪದ್ಮಾವತಿ) ಐತಿಹಾಸಿಕ ಕಥಾ ಚಿತ್ರಕ್ಕೆ ಸಿಬಿಎಫ್ಸಿ ಸರ್ಟಿಫಿಕೇಟ್‌ ನೀಡಿದ್ದು ಇದೇ ಜನವರಿ 21ರಂದು ಅದು ಬಿಡುಗಡೆಯಾಗಲಿರುವುದನ್ನು ಪ್ರತಿಭಟಿಸಿ ರಾಜಸ್ಥಾನದ ಕರ್ಣಿ ಸೇನೆ CBFC ಕಚೇರಿ ಮುಂದೆ ಜಮಾಯಿಸಿರುವುದನ್ನು ಲೆಕ್ಕಿಸಿ ಹೆಚ್ಚುವರಿ ಭದ್ರತಾ ಸಿಬಂದಿಗಳನ್ನು ನಿಯೋಜಿಸಲಾಗಿದೆ.

Advertisement

ಕೇಂದ್ರ ಸೆನ್ಸಾರ್‌ ಮಂಡಳಿಯ ಕಾರ್ಯಾಲಯದ ಮುಂದೆ ಜಮಾಯಿಸಿರುವ ಹಲವಾರು ಕರ್ಣಿ ಸೇನಾ ಪ್ರತಿಭಟನೆಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕರ್ಣಿ ಸೇನಾ ಅಧ್ಯಕ್ಷ ಸುಖದೇವ್‌ ಸಿಂಗ್‌ ಗೋಗಮೇದಿ ಅವರು ಮೊನ್ನೆ ಗುರುವಾರವೇ ತಮ್ಮ ಕಾರ್ಯಕರ್ತರು ಸಿಬಿಎಫ್ಸಿ ಕಚೇರಿಯನ್ನು ಘೇರಾವ್‌ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇಂದು ಸಾವಿರಾರು ಜನರು  ಸಿಬಿಎಫ್ಸಿ ಕಚೇರಿ ಮುಂದಿನ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ಬ್ರಿಟಿಷರ ಕಾಲದಿಂದಲೂ ನಡೆದು ಬಂದಿರುವ ಸಿಬಿಎಫ್ಸಿಗೆ ಹೇಗೆ ಕೆಲಸ ಮಾಡಬೇಕೆಂದೇ ಗೊತ್ತಿಲ್ಲ ಎಂದು ಸುಖದೇವ್‌ ಅವರು “ಪದ್ಮಾವತ್‌’ ಚಿತ್ರಕ್ಕೆ ಸರ್ಟಿಫಿಕೇಟ್‌ ನೀಡಿ ಅದರ ಬಿಡುಗಡೆಯನ್ನು ಅನುಮತಿಸಿರುವ ಸೆನ್ಸಾರ್‌ ಮಂಡಳಿಯ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next