Advertisement

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

08:59 PM May 07, 2024 | Team Udayavani |

ಅಂಕೋಲಾ : ಅನಾರೋಗ್ಯದ ನಿಮಿತ್ತ ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಸಾಧ್ಯವಾಗದಿದ್ದಕ್ಕೆ ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಬೇಸರ ವ್ಯಕ್ತ ಪಡಿಸಿದ ಘಟನೆ ನಡೆದಿದೆ.

Advertisement

ಅವರು ಪ್ರತಿ ಚುನಾವಣೆಗೆ ತಮ್ಮ ಮನೆಯ ಬಳಿಯ ಬಡಗೇರಿ ಶಾಲೆಯಲ್ಲಿ ತಮ್ಮ ಮತ ಚಲಾವಣೆ ಮಾಡುತ್ತಿದ್ದರು. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅನಾರೋಗ್ಯದ ನಿಮಿತ್ತ ಮತ ಚಲಾವಣೆ ಮಾಡಲಾಗಲಿಲ್ಲ. ಆದರೆ 80 ವರ್ಷ ದಾಟಿದ ಮತದಾರರಿಗೆ ಮನೆಯಲ್ಲಿಯೇ ಬಂದು ಮತದಾನ ಮಾಡುವ ಪ್ರಕ್ರಿಯೆಗೆ ಚುನಾವಣಾ ಆಯೋಗ ವ್ಯವಸ್ಥೆ ಕಲ್ಪಿಸಿತ್ತು. ಆದರೆ ಇಲಾಖೆಗೆ ತಿಳಿಸಿದ್ದೆ ನನಗೆ ಮತಗಟ್ಟೆಗೆ ಹೊಗಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿಯೇ ಮತ ಚಲಾವಣೆಗೆ ಅವಕಾಶ ಕಲ್ಪಿಸಲು ತಿಳಿಸಲಾಗಿತ್ತು.ಆದರೆ ಇಲ್ಲಿಯು ಅವಕಾಶ ನೀಡಲಿಲ್ಲ. ಇದರಿಂದಾಗಿ ನನಗೆ ತುಂಬಾ ಬೇಸರವಾಗಿದೆ ಎಂದು ಸುಕ್ರಿ ಗೌಡ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next