Advertisement

ಶರಣು ಸಲಗರಗೆ ಬಿಜೆಪಿ ಟಿಕೆಟ್‌ಗಾಗಿ ಪಾದಯಾತ್ರೆ

04:37 PM Jan 22, 2021 | Team Udayavani |

ಬಸವಕಲ್ಯಾಣ: ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಯುವ ಮುಖಂಡ ಶರಣು ಸಲಗರ ಅವರಿಗೆ ಬಿಜೆಪಿಯಿಂದ ಟಿಕೆಟ್‌ ಸಿಗಲೆಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜಾಫರವಾಡಿ ಗ್ರಾಮದಿಂದ ಸುಕ್ಷೇತ್ರ ಹಾರಕೂಡ ಗ್ರಾಮದವರೆಗೆ ದೀಡ್‌ ನಮಸ್ಕಾರ ಮುಖಾಂತರ ಪಾದಯಾತ್ರೆ ನಡೆಸಿದರು.

Advertisement

ಜಿಪಂ ಮಾಜಿ ಸದಸ್ಯ ಜಗನ್ನಾಥ ಪಾಟೀಲ್‌ ಹಾಗೂ ಊರಿನ ಹಿರಿಯ ಮುಖಂಡ ಶಾಂತವಿಜಯ ಪಾಟೀಲ್‌ ಅವರು ಗ್ರಾಮದ ಹನುಮಾನ ಮಂದಿರದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಶಾಂತವಿಜಯ ಪಾಟೀಲ್‌ ಮಾತನಾಡಿ, ಶರಣು ಸಲಗರ ಅವರು ಓರ್ವ ಕ್ರಿಯಾಶೀಲ ಹಾಗೂ ಜನರ ಹಿತ ಚಿಂತಕರಾಗಿದ್ದಾರೆ. ಮೂರು ತಿಂಗಳ ದೀರ್ಘಾವ ಧಿ ಲಾಕ್‌ಡೌನ್‌ ದಿನಗಳಲ್ಲಿ ಕ್ಷೇತ್ರದ 50,000 ಬಡ ಕುಟುಂಬಗಳಿಗೆ ಅವರು ಮಾಡಿರುವ ಉಚಿತ  ಅನ್ನದಾಸೋಹ ಸೇವೆ ಮರೆಯಲಾರದು ಎಂದರು.

ಹುಲಸೂರ, ಪರತಾಪುರ, ಮಂಠಾಳ, ಗುಂಡೂರ, ಯಲ್ಲದಗುಂಡಿ, ಭೋಸಾ, ಕೋಹಿನೂರ ಹಾಗೂ ಸಿರಗಾಪುರ ಗ್ರಾಮಗಳಿಂದ 150ಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಜಾಫರವಾಡಿ ಗ್ರಾಮದ ಪ್ರಮುಖರಾದ ಮಹಾರಾಜಪ್ಪ ಮುಳೆ, ಮಾರುತಿ ದಾಸರವಾಡಿ, ಗಣಪತಿ ದಾಸೂರೆ, ಸೂರ್ಯಕಾಂತ್‌ ಸೂರ್ಯವಂಶಿ, ಮೌನೇಶ್ವರ ಪಾಂಚಾಳ, ಚನ್ನಪ್ಪ ಪಾಟೀಲ್‌, ಮಹಾದೇವ ಪೂಜಾರಿ ಹಾಗೂ ಪಕ್ಷದ ವಿವಿಧ ಪದಾ ಧಿಕಾರಿಗಳಾದ ರಾಜಕುಮಾರ ಸಿರಗಾಪುರ, ಶಿವರಾಜ ತಾಟೆ, ನಿತ್ಯಾನಂದ ಕೊಂಡಗೆ, ಪ್ರಕಾಶ್‌ ಸುಂಠಾಣೆ, ರತಿಕಾಂತ್‌ ಕೋಹಿನೂರ, ನಾಗೇಶ್‌ ಮೇತ್ರೆ, ಸಿದ್ದು ಬಿರಾದಾರ, ಗುರುನಾಥ ಮೂಲಗೆ, ಸಲ್ಮಾನ್‌ ಶರೀಫ್‌, ಜ್ಞಾನೇಶ್ವರ ಪಾಟೀಲ್‌, ಶಿವಕುಮಾರ ಶೇಟಗಾರ, ಬಾಬುರಾವ ಹಿಂಸೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next