Advertisement

ಎಲ್ಲ ವರ್ಗದ ಆರ್ಥಿಕ ಚೇತರಿಕೆಗೆ ಪ್ಯಾಕೇಜ್‌

05:50 AM May 15, 2020 | Suhan S |

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ ಎಲ್ಲ ವರ್ಗದವರ ಆರ್ಥಿಕ ಚೇತರಿಕೆಗೆ ಸಹಕಾರಿಯಾಗಲಿದೆ ಎಂದು ಪಶು ಸಂಗೋಪನೆ, ಹಜ್‌ ಮತ್ತು ವಕ್ಫ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಿಸಾನ್‌ ಕ್ರೆಡಿಟ್‌ ಮೂಲಕ 2 ಲಕ್ಷ ಕೋಟಿಯನ್ನು 2.5 ಲಕ್ಷ ಕೋಟಿ ರೈತರಿಗೆ, ಮೀನುಗಾರರಿಗೆ ಹಾಗೂ ಪಶುಪಾಲಕರಿಗೆ ನೀಡಲಾಗುತ್ತಿದೆ. ನಬಾರ್ಡ್‌ ಯೋಜನೆ ಅಡಿಯಲ್ಲಿ 29,500 ಕೋಟಿ ಸಾಲ, ನಬಾರ್ಡ್‌ ಮೂಲಕ ರೈತರಿಗೆ 2 ತಿಂಗಳಲ್ಲಿ ನೀಡಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ 25 ಲಕ್ಷ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಿಸಲಾಗಿದೆ. ಸಣ್ಣ ರೈತರಿಗೆ ಮೇ 31ರ ವರೆಗಿನ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಾಗಿದೆ. ಆಯಾ ಜಿಲ್ಲೆಗಳಲ್ಲಿ ಕೆಲಸ ಮಾಡುವವರಿಗೆ ನರೇಗಾ ದಿನಗೂಲಿ ಹೆಚ್ಚಿಸಲಾಗಿದೆ. 10 ಜನಕ್ಕಿಂತ ಹೆಚ್ಚು ಜನ ಕೆಲಸದ ಸಂಸ್ಥೆಗಳು ಇಎಸ್‌ಐ ಮಾಡಲು ಅನುಮತಿ ನೀಡಿರುವುದು ಅವರ ಆರೋಗ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರವಾಗಿದೆ ಎಂದು ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next