Advertisement

ದ.ಕ. ಜಿಲ್ಲೆಗೆ ಬಂತು 21.5 ಟನ್‌ ಆಕ್ಸಿಜನ್‌

01:06 AM May 05, 2021 | Team Udayavani |

ಮಂಗಳೂರು: ದ.ಕ. ಜಿಲ್ಲೆಯ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಮಸ್ಯೆ ಆಗದಂತೆ ಒಟ್ಟು 21.5 ಟನ್‌ ಆಕ್ಸಿಜನ್‌ ಅನ್ನು ಜಿಲ್ಲೆಗೆ ತರಿಸಲಾಗಿದೆ.

Advertisement

“ಉದಯವಾಣಿ’ ಜತೆಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು, “ಮಂಗಳವಾರ ಸಂಜೆ 5.5 ಟನ್‌ ಆಕ್ಸಿಜನ್‌ ಬಂದಿದೆ. ಬುಧವಾರ ಮುಂಜಾನೆಯೊಳಗೆ ಮತ್ತೆ 7 ಟನ್‌ ಹಾಗೂ 9 ಟನ್‌ ಪ್ರತ್ಯೇಕವಾಗಿ ಬರಲಿದೆ. ಇದನ್ನು 26 ಖಾಸಗಿ ಆಸ್ಪತ್ರೆ ಹಾಗೂ 5 ಸರಕಾರಿ ಆಸ್ಪತ್ರೆಯಲ್ಲಿ ಸಂಗ್ರಹಿಸಡಲಾಗುತ್ತದೆ’ ಎಂದರು.

ಆಕ್ಸಿಜನ್‌ ತರಿಸುವ ಪ್ರಕ್ರಿಯೆ ಸಾಮಾನ್ಯ ವಾಗಿ ಎರಡು ದಿನಕ್ಕೊಮ್ಮೆ ನಿಯಮಿತವಾಗಿ ನಡೆಯುತ್ತದೆ. ಸದ್ಯಕ್ಕೆ ದ.ಕ. ಜಿಲ್ಲೆಯಲ್ಲಿ ಕೊರತೆ ಇಲ್ಲ ಎಂದರು.

ಪಾಲಕ್ಕಾಡ್‌ನಿಂದ ಕಚ್ಚಾ ವಸ್ತು ಲಭ್ಯತೆಯಲ್ಲಿ ವ್ಯತ್ಯಯವಾದ ವಿಚಾರವನ್ನು ಸರಕಾರದ ಗಮನಕ್ಕೆ ತರಲಾಗಿದೆ. ಪರ್ಯಾಯವಾಗಿ ಬಳ್ಳಾರಿಯಿಂದಲೇ ತರಿಸುವ ಬಗ್ಗೆ ಗಮನಸೆಳೆಯಲಾಗಿದೆ ಎಂದರು.

ಹೆಚ್ಚುವರಿ  ಆಕ್ಸಿಜನ್‌ಗೆ ಕ್ರಮ :

Advertisement

ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪೈಕಿ ಶೇ. 15ರಷ್ಟು ಮಂದಿಗಷ್ಟೇ ಮೆಡಿಕಲ್‌ ಆಕ್ಸಿಜನ್‌ ಅಗತ್ಯ ಬಿದ್ದಿದೆ. ಹೊಸದಾಗಿ ಬಳ್ಳಾರಿಯಿಂದ ಆಕ್ಸಿಜನ್‌ ತರಿಸಲಾಗಿದೆ. ಸಚಿವ ಜಗದೀಶ್‌ ಶೆಟ್ಟರ್‌ ಅವರು ಆಕ್ಸಿಜನ್‌ ಸಂಬಂಧಿತ ವಿಚಾರದ ಉಸ್ತುವಾರಿ ಆಗಿರುವ ಕಾರಣದಿಂದ ಹೆಚ್ಚುವರಿಯಾಗಿ ಆಕ್ಸಿಜನ್‌ ನೀಡುವ ಬಗ್ಗೆ ಅವರ ಗಮನಸೆಳೆಯಲಾಗುವುದು. ಕೋಟ ಶ್ರೀನಿವಾಸ ಪೂಜಾರಿ, ದ.ಕ. ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next