Advertisement

ಬಾವಿಗೆ ಬಿದ್ದ ಎತ್ತು ರಕ್ಷಣೆ

06:30 PM Mar 04, 2021 | Team Udayavani |

ಸಂಬರಗಿ: ಪಾರ್ಥನಹಳ್ಳಿ ಗ್ರಾಮದ ಹೊರವಲಯದಲ್ಲಿ ಕಮಲ ಬಿರಾದಾರ ಇವರ ತೆರದ ಬಾವಿಯಲ್ಲಿ ಸುಮಾರು 1 ಲಕ್ಷ ರೂ. ಬೆಲೆಬಾಳುವ ಎತ್ತು ಬಿದ್ದ ಘಟನೆ ಬುಧವಾರ ನಡೆದಿದ್ದು, ಅಗ್ನಿಶಾಮಕ ತಂಡ ಬಂದು ಸುರಕ್ಷಿತವಾಗಿ ಅ ಎತ್ತನ್ನು ಭಾವಿಯಿಂದ ಹೊರತೆಗೆದು ಜಿವಿತ ಆನಾಹುತ ತಡೆಗಟ್ಟಿದರು

Advertisement

ಪಾರ್ಥನಹಳ್ಳಿ ಗ್ರಾಮದ ಮಿರಾಸಾಬ ಉಮರಸಾಬ ಪಟೇಲ ಇವರು ತಮ್ಮ ಎತ್ತು ಗಳನ್ನು ತೆಗೆದುಕೊಂಡು ತೊಟಕ್ಕೆ ತೆರಳುತ್ತಿದ್ದರು. ಆದರೆ ರಸ್ತೆ ಮೇಲೆ ಬಸ್‌ ಬಂದಾಗ ಹೆದರಿದ ಎತ್ತು ರಸ್ತೆ ಬದಿಗೆ ಸರಿದಿದ್ದು, ತೆರೆದ ಬಾವಿಗೆ ಬಿದ್ದಿದೆ. ಎತ್ತಿನ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದಾಗ ಅಗ್ನಿಶಾಮಕ ದಳದವರು ಆಗಮಿಸಿ, ಆರ್‌.ಕೆ.ಸಂಭೋಜಿ ನೇತೃತ್ವದಲ್ಲಿ ಆ ಎತ್ತನ್ನು ಸುರಕ್ಷಿತವಾಗಿ ಬಾವಿಯಿಂದ ಹೊರತೆಗೆದರು. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ರಾಚಯ್ಯ ಮಠಪತಿ, ಆಸಿಫ್‌ ಸನದಿ, ಸಂತೊಷ ರಾಠೊಡ, ರವಿಂದ್ರ ಸಂಗಮ, ಬಾಬಾಗೌಡ ಬಿರಾದಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next