Advertisement

2014ರ ಓವೈಸಿ ದ್ವೇಷದ ಭಾಷಣ, ತನಿಖೆಗೆ ದಿಲ್ಲಿ ಕೋರ್ಟ್‌ ಆದೇಶ

10:30 AM Jan 29, 2019 | Team Udayavani |

ಹೊಸದಿಲ್ಲಿ : ಎಐಎಂಐಎಂ ಪಕ್ಷದ ಮುಖ್ಯಸ್ಥ ಮತ್ತು ಹೈದರಾಬಾದ್‌ ಸಂಸದ ರಾಗಿರುವ ಅಸಾದುದ್ದೀನ್‌ ಓವೈಸಿ ಅವರು 2014ರಲ್ಲಿ ನರೇಂದ್ರ ಮೋದಿ ವಿರುದ್ಧ ಮಾಡಿದ್ದರೆನ್ನಲಾದ ದ್ವೇಷದ ಕಿಚ್ಚು ಹಚ್ಚುವ ಭಾಷಣದ ಬಗ್ಗೆ ತನಿಖೆ ನಡೆಸುವಂತೆ ದಿಲ್ಲಿಯ ಕರ್ಕರಡೂಮಾ ನ್ಯಾಯಾಲಯ ಆದೇಶಿಸಿದೆ. 

Advertisement

ದಿಲ್ಲಿ ಪೊಲೀಸರ ಮುಚ್ಚುಗಡೆ ವರದಿ ವಿರುದ್ಧ ಸಲ್ಲಿಸಲಾಗಿದ್ದ ಮನವಿಯನ್ನು ಆಲಿಸಿದ ನ್ಯಾಯಾಲಯ ಪ್ರಕರಣದ ತನಿಖೆಗೆ ಆದೇಶಿಸಿತು. 

ಸಮಾಜಸೇವಾ ಕಾರ್ಯಕರ್ತ ಮತ್ತು ಅರ್ಚಕರಾಗಿರುವ ದೂರುದಾರ ಅಜಯ್‌ ಗೌತಮ್‌ ಅವರು ಹೈದರಾಬಾದ್‌ ಸಂಸದ ಓವೈಸಿ ಅವರ ದ್ವೇಷದ ಭಾಷಣದ ವಿರುದ್ಧ ಎಫ್ಐಆರ್‌ ದಾಖಲಿಸಿದ್ದರು. ಓವೈಸಿ ಭಾಷಣದ ಲೇಖನ ಆನ್‌ಲೈನ್‌ನಲ್ಲಿ ಪ್ರಕಟವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next