Advertisement

ಉ.ಪ್ರ.: 21 ಜಿಲ್ಲೆಗಳಲ್ಲಿ 32 ಸಾವಿರ ವಲಸಿಗರಿಗೆ ಪೌರತ್ವ ನೀಡಲು ಸಿದ್ಧತೆ

09:51 AM Jan 14, 2020 | Team Udayavani |

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಅರ್ಹ ವಲಸಿಗರಿಗೆ ಭಾರತದ ನಾಗರಿಕತೆಯನ್ನು ನೀಡುವ ಪ್ರಕ್ರಿಯೆಗೆ ಉತ್ತರ ಪ್ರದೇಶದಲ್ಲಿ ಚಾಲನೆ ದೊರಕಿದೆ. ರಾಜ್ಯದಲ್ಲಿರುವ ಒಟ್ಟು 75 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ಒಟ್ಟು 32 ಸಾವಿರ ವಲಸಿಗರನ್ನು ಗುರುತಿಸಲಾಗಿದೆ ಎಂದು ಉತ್ತರಪ್ರದೇಶ ಸಚಿವ ಶ್ರೀಕಾಂತ ಶರ್ಮಾ ಅವರು ಸೋಮವಾರ ತಿಳಿಸಿದ್ದಾರೆ.

Advertisement

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹೊರಡಿಸಿರುವ ಸೂಚನೆಯನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಶರ್ಮಾ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇವರಲ್ಲಿ ಹೆಚ್ಚಿನವರು ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದವರಾಗಿದ್ದಾರೆ ಎಂಬ ಮಾಹಿತಿಯನ್ನೂ ಸಹ ಸಚಿವರು ಇದೇ ಸಂದರ್ಭದಲ್ಲಿ ನೀಡಿದರು. ಸಹರಣಪುರ, ಗೋರಖ್ ಪುರ, ಅಲಿಗಢ, ರಾಂ ಪುರ, ಪ್ರತಾಪಗಢ, ಪಿಲಿಭಿತ್, ಲಕ್ನೋ, ವಾರಣಾಸಿ, ಬಹ್ರೈಚ್, ಲಖಿಂಪುರ, ಮೀರತ್ ಮತ್ತು ಆಗ್ರಾ ಜಿಲ್ಲೆಗಳಿಂದ ವಲಸಿಗರಿಗೆ ಸಂಬಂಧಿಸಿದ ಮೊದಲ ಪಟ್ಟಿ ರಾಜ್ಯ ಸರಕಾರದ ಕೈ ಸೇರಿದೆ ಎಂದು ಸಚಿವರು ತಿಳಿಸಿದ್ದಾರೆ.

ಪಿಲಿಭಿತ್ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯ ವಲಸಿಗರಿದ್ದಾರೆ ಆದರೆ ಇವರ ನಿಖರ ಸಂಖ್ಯೆ ಇನ್ನಷ್ಠ ಲಭ್ಯವಾಗಬೇಕಾಗಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next