Advertisement

ಸಿದ್ದರಾಮಯ್ಯ ಅವಹೇಳನಕಾರಿ ವಿಡಿಯೋ ವಿರುದ್ಧ ಆಕ್ರೋಶ

07:06 AM Jun 04, 2020 | mahesh |

ರಾಣಿಬೆನ್ನೂರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಅವಹೇಳನಕಾರಿ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಪುನೀತ ಕೇರಿ ಹಳ್ಳಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆತನನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ಬುಧವಾರ ಶಹರ ಠಾಣೆ ಪಿಎಸ್‌ಐ ಪ್ರಭು
ಕೆಳಗಿನಮನಿಗೆ ದೂರು ದಾಖಲಿಸುವಂತೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ರಾಜ್ಯ ಕುರುಬ ಸಂಘದ ನಿರ್ದೇಶಕ ಮೃತ್ಯುಂಜಯ ಗುದಿಗೇರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗಣ್ಯ ವ್ಯಕ್ತಿಗಳ ಬಗ್ಗೆ ಹಗುರವಾಗಿ ಮಾತನಾಡುವುದು ಫ್ಯಾಶನ್‌ ಆಗಿ ಬಿಟ್ಟಿದೆ.
ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು. ತಾಲೂಕು ಕುರುಬ ಸಂಘದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ಚಂದ್ರಪ್ಪ ಕಂಬಳಿ, ರಾಕೇಶ ಮೇಡ್ಲೆರಿ, ಕಿರಣ ಗುಳೇದ, ಆನಂದ ಹುಲಬನ್ನಿ, ಭರಮಪ್ಪ ಬಾಗಲವರ, ನಾಗರಾಜ ದೊಣ್ಣರ, ಮಹೇಶ ಕಂಬಳಿ ಸೇರಿದಂತೆ ಮತ್ತಿತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next