Advertisement

ಅಂಗಡಿಗೆ ಬಂದಿದ್ದ ಇಬ್ಬರು ಮಕ್ಕಳ ಶಿರಚ್ಛೇದನ; ಆರೋಪಿ ಬಂಧನ

10:46 AM Jul 14, 2019 | Team Udayavani |

ಜಾರ್ಖಂಡ್: ಇಬ್ಬರು ಬುಡಕಟ್ಟು ಮಕ್ಕಳ ಶಿರಚ್ಛೇದನ ಮಾಡಿದ ಆರೋಪದಲ್ಲಿ 35 ವರ್ಷದ ವ್ಯಕ್ತಿಯನ್ನು ಜಾರ್ಖಂಡ್ ನ ಲಾಟೆಹಾರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸೆಮಾರ್ ಹಾಟ್ ಗ್ರಾಮದಲ್ಲಿ ಆರೋಪಿ ಮನೆ ಸಮೀಪದ ಮರಳು ರಾಶಿಯಲ್ಲಿ ಹುದುಗಿಟ್ಟ ತಲೆ ಇಲ್ಲದ ಎರಡು ದೇಹಗಳು ಪತ್ತೆಯಾಗಿರುವುದಾಗಿ ಪೊಲೀಸರು ವಿವರಿಸಿದ್ದಾರೆ.

ಇದು ನರಬಲಿಯಾಗಲಿ, ವಾಮಾಚಾರದ ಘಟನೆ ಅಲ್ಲ ಎಂದು ಬಹುತೇಕ ಸ್ಥಳೀಯರು ಶಂಕಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಬುಧವಾರ ರಾತ್ರಿ ಆರೋಪಿ ಅಂಗಡಿಗೆ 10 ವರ್ಷದ ಬಾಲಕಿ ಬಂದಿದ್ದಾಗ, ಆಕೆಯನ್ನು ಲೈಂಗಿಕವಾಗಿ ಹಿಂಸಿಸಲು ಆರಂಭಿಸಿದ್ದ. ಈ ವೇಳೆ ಆಕಸ್ಮಿಕವಾಗಿ 11 ವರ್ಷದ ಬಾಲಕನೊಬ್ಬ ಬಂದಿದ್ದ. ಕೂಡಲೇ ಆರೋಪಿ ಇಬ್ಬರನ್ನು ತನ್ನ ಮನೆಗೆ ಎಳೆದೊಯ್ದು ಕೊಡಲಿಯಿಂದ ಇಬ್ಬರ ಶಿರಚ್ಛೇದನ ಮಾಡಿ ಹೂತು ಹಾಕಿದ್ದ ಎಂದು ಡಿಐಜಿ ಶುಕ್ಲಾ ವಿವರಿಸಿದ್ದಾರೆ.

ಮನೆಯ ಮತ್ತೊಂದು ಮಗ್ಗುಲಲ್ಲಿ ಬಾಲಕನ ತಲೆ ಸಿಕ್ಕಿದ್ದು, ಬಾಲಕಿಯ ತಲೆ ಯಾವ ಸ್ಥಳದಲ್ಲಿ ಎಸೆಯಲಾಗಿದೆ ಎಂಬ ಬಗ್ಗೆ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ವರದಿ ತಿಳಿಸಿದೆ. ಇಬ್ಬರು ಮಕ್ಕಳ ಮೃತದೇಹವನ್ನು ಮನೆಯವರಿಗೆ ಒಪ್ಪಿಸಿದ್ದು, ಅವರ ಪದ್ಧತಿಯಂತೆ ಅಂತ್ಯಸಂಸ್ಕಾರ ನಡೆಸಿರುವುದಾಗಿ ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next