Advertisement

ಕುತೂಹಲ ಕೆರಳಿಸಿದ ರಜನಿ- ಕಮಲ್‌ ಭೇಟಿ

07:30 AM Feb 19, 2018 | Team Udayavani |

ಚೆನ್ನೈ: ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ದಿನಗಣನೆ ಆರಂಭವಾಗಿರು ವಂತೆಯೇ ಬಹು ಭಾಷಾ ನಟ ಕಮಲ್‌ಹಾಸನ್‌ ಭಾನುವಾರ ಸೂಪರ್‌ಸ್ಟಾರ್‌ ರಜನಿಕಾಂತ್‌ರನ್ನು ಭೇಟಿಯಾ ಗಿರುವುದು ಕುತೂಹಲ ಕೆರಳಿಸಿದೆ. ಇಬ್ಬರು ಸ್ಟಾರ್‌ಗಳು ರಾಜಕೀಯ ಮೈತ್ರಿ ಮಾಡಿಕೊ ಳ್ಳುತ್ತಾರೆಯೇ ಎಂಬ ಗುಸು ಗುಸು ಕೇಳಿಬರುತ್ತಿ ರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

Advertisement

ಫೆ.21ರಂದು ಕಮಲ್‌ ಅವರು ಪಕ್ಷ ಸ್ಥಾಪಿಸಲಿದ್ದು, ಭಾನುವಾರ ಚೆನ್ನೈನ ಪೋಯೆಸ್‌ ಗಾರ್ಡನ್‌ನಲ್ಲಿರುವ ರಜನಿಕಾಂತ್‌ ನಿವಾಸಕ್ಕೆ ತೆರಳಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು 21ರಿಂದ ಆರಂಭವಾಗಲಿರುವ ರಾಜ್ಯವ್ಯಾಪಿ ಪ್ರವಾಸದಲ್ಲಿ ತಮ್ಮೊಂದಿಗೆ ಕೈಜೋಡಿಸುವಂತೆ ರಜನಿಗೆ ಆಹ್ವಾನ ನೀಡಿದ್ದಾರೆ. ನಂತರ ಸುದ್ದಿಗಾರರ ಜತೆ ಮಾತನಾಡಿದ ಕಮಲ್‌, “ಪಕ್ಷವನ್ನು ಅಧಿಕೃತವಾಗಿ ಸ್ಥಾಪಿಸುವ ಮುನ್ನ ನಾನ್ಯಾರನ್ನು ಇಷ್ಟಪಡುತ್ತೇನೆಯೋ ಅವರನ್ನು ಭೇಟಿಯಾಗುತ್ತೇನೆ. ರಜನಿ ಜತೆ ರಾಜಕೀಯ ಮಾತಾಡಿಲ್ಲ,’ ಎಂದಿದ್ದಾರೆ. ಮೈತ್ರಿ ಬಗೆಗಿನ ಪ್ರಶ್ನೆಗೆ, “ಕಾಲವೇ ಉತ್ತರಿಸಲಿದೆ’ ಎಂದಷ್ಟೇ ಹೇಳಿದ್ದಾರೆ. ಇದಾದ ಬಳಿಕ ಅವರು ಡಿಎಂಕೆ ವರಿಷ್ಠ ಕರುಣಾನಿಧಿ ಅವರನ್ನೂ ಭೇಟಿಯಾಗಿದ್ದಾರೆ.

ನಮ್ಮ ಸ್ಟೈಲೇ ಬೇರೆ: ಇನ್ನೊಂದೆಡೆ, ನಟ ರಜನಿಕಾಂತ್‌ ಅವರೂ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ್ದು, “ನನ್ನ ಗೆಳೆಯ ಕಮಲ್‌ ಹಾಸನ್‌ ರಾಜಕೀಯ ಪ್ರವೇಶಿಸುತ್ತಿರುವುದು ಯಾವುದೇ ಹಣ ಅಥವಾ ಹೆಸರಿಗಾಗಿ ಅಲ್ಲ. ತಮಿಳು ನಾಡಿನ ಜನರಿಗೆ ಒಳ್ಳೆಯದು ಮಾಡುವುದೇ ಅವರ ಉದ್ದೇಶ. ಅವರು ಈ ಕೆಲಸದಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸುತ್ತೇನೆ ಮತ್ತು ದೇವರಲ್ಲೂ ಪ್ರಾರ್ಥಿಸುತ್ತೇನೆ,’ ಎಂದಿದ್ದಾರೆ. ಮೈತ್ರಿ ಕುರಿತ ಪ್ರಶ್ನೆಗೆ, “ಸಿನಿಮಾದಲ್ಲೂ ನಮ್ಮಿಬ್ಬರ ಸ್ಟೈಲ್‌ ವಿಭಿನ್ನವಾಗಿದೆ. ಹೀಗಿರುವಾಗ ರಾಜಕೀಯದಲ್ಲಿ ಒಂದೇ ಆಗಿರಲು ಸಾಧ್ಯವೇ?’ ಮರುಪ್ರಶ್ನೆ ಹಾಕಿದ್ದಾರೆ. ಈ ಮೂಲಕ ರಾಜಕೀಯ ಮೈತ್ರಿ ಸಾಧ್ಯತೆ ಇಲ್ಲ ಎಂಬ ಸುಳಿವು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next