Advertisement
1905 ಶಾಲೆ ಆರಂಭಮಾಜಿ ಸಚಿವರು, ಮಾಜಿ ಶಾಸಕರನ್ನು ಸಮಾಜಕ್ಕೆ ನೀಡಿದ ಹೆಮ್ಮೆ
ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಮಾಜಿ ಶಾಸಕ ವಸಂತ ಬಂಗೇರ, ಅಂತಾರಾಷ್ಟ್ರೀಯ ಖ್ಯಾತಿಯ ಯಕ್ಷಿಣಿಗಾರ ಪ್ರೊ| ಶಂಕರ್, ಹೆಸರಾಂತ ಇತಿಹಾಸ ತಜ್ಞ ಡಾ| ಸೂರ್ಯನಾಥ ಕಾಮತ್, ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆ ಪಡಂಗಡಿ, ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಯು. ರವೀಂದ್ರ ರಾವ್, ವಾಯುಸೇನೆಯ ಮಾಜಿ ಯೋಧ ಎಂ. ರತ್ನವರ್ಮ ಜೈನ್ ಸಹಿತ ನೂರಾರು ಸಾಧಕರು ಇದೇ ಶಿಕ್ಷಣ ದೇಗುಲದಲ್ಲಿ ಅಕ್ಷರಾಭ್ಯಾಸ ಮಾಡಿದ್ದರು. ಶಾಲೆಯ ಅಭಿವೃದ್ಧಿಗೆ ಕೃಷ್ಣ ಪಡ್ವೆಟ್ನಾಯ, ವೆಂಕಟಕೃಷ್ಣ ಹೆಬ್ಟಾರ್, ಅಣ್ಣಪ್ಪಯ್ಯ ಮಾಸ್ಟರ್ 4.57 ಎಕ್ರೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಎಲ್.ಕೆ.ಜಿ., ಯು.ಕೆ.ಜಿ. ಹಾಗೂ ಆಂಗ್ಲ ಮಾಧ್ಯಮವನ್ನು 1ನೇ ತರಗತಿಗೆಯಿಂದ ಪ್ರಾರಂಭಿಸಲಾಗಿದೆ.
Related Articles
ಶಾಲೆಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಕೊಡುಗೆ ಅಪಾರ. ಶಾಸಕ ಹರೀಶ್ ಪೂಂಜ ಮಾದರಿ ಶಾಲೆಯಾಗಿ ನಿರ್ಮಿಸುವ ಕನಸು ಹೊಂದಿದ್ದು, ತಾಲೂಕಿನ ಶಾಸಕರ ಮಾದರಿ ಶಾಲೆಯಾಗಿದೆ. ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ನರಸಿಂಹ ಕೃಷ್ಣ ಭಿಡೆ, ಡಾ| ಬಿ. ನಾರಾಯಣ್ ರಾವ್, ಕೆ.ಬಿ. ಮಲ್ಲ, ಎನ್. ಶಂಕರ ನಾರಾಯಣ ರಾವ್, ರಾಮದಾಸ ಬಾಳಿಗಾ ಅವರ ಕೊಡುಗೆ ಅಪಾರ.
ಶಾಲೆಯಲ್ಲಿ 5 ಸಾವಿರ ಪುಸ್ತಕ ಹೊಂದಿರುವ ವಾಚನಾಲಯವಿದ್ದು, ಕಂಪ್ಯೂಟರ್ ಕೊಠಡಿ, ಉತ್ತಮ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮೇಕರ್ ಸ್ಪೇಸ್, ಸಿ.ಸಿ. ಟಿ.ವಿ ವ್ಯವಸ್ಥೆ ಇದೆ. ಲೈಫ್ ಲ್ಯಾಬ್ ಹೊಂದಿದೆ.
ಮುಖ್ಯೋಪಾಧ್ಯಾಯರು
ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ, ಹಿರಿಯ ಶಿಕ್ಷಕರಾಗಿ ಡಿ. ಮಹದೇವ ಭಟ್, ಉಮೇಶ್ ರಾವ್, ಶೇಷಗಿರಿ ರಾವ್, ಉಪೇಂದ್ರ ಭಟ್, ಗಣಪತಿ ವಿಷ್ಣು ಹೊಳ್ಳ, ಕಲ್ಲಡ್ಕ ಶಂಕರನಾರಾಯಣ ರಾವ್, ಬೋಳಂಗಡಿ ಮಂಗೇಶ್ವರ ರಾವ್, ಲಿಲ್ಲಿ ಬಾಯಿ, ಚಿನ್ನಪ್ಪ, ಶ್ರೀಧರ ಪ್ರಭು, ಕೃಷ್ಣಪ್ಪ ಗೌಡ, ಎಸ್.ರಾಮಚಂದ್ರ ರಾವ್, ರಾಧಾ ಎಸ್. ಕದ್ರಿಕರ್, ಪೌಲಿನ್, ಎ.ಬಿ. ಪಾರ್ವತಿ, ಮೀರಾಬಾಯಿ, ಚಂದು ಶೆಟ್ಟಿ, ಹೂವಯ್ಯ ಶೆಟ್ಟಿ, ಸುಬ್ರಾಯ ಉಪಾಧ್ಯಾಯ, ಸುಗುಣಾ ಪೈ, ಸುಧಾಕರ ಪೈ, ಕಮಲಾಕ್ಷ ಆಚಾರ್, ನೇಮಿರಾಜ ಹೆಗ್ಡೆ ಮತ್ತಿತರರು ಸೇವೆ ಸಲ್ಲಿಸಿದ್ದಾರೆ.
Advertisement
ಹಳೆ ವಿದ್ಯಾರ್ಥಿಗಳು, ಅಧಿಕಾರಿಗಳು, ಶಾಸಕರ ನೆರವಿನಿಂದ ಶಾಲೆಯ ಗತ ವೈಭವವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಜತೆಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಮಹದಾಸೆ ಹೊಂದಿದ್ದು, ಅದಕ್ಕೆ ಪೂರಕ ಪ್ರಯತ್ನ ಪ್ರಾರಂಭಿಸಲಾಗಿದೆ.-ಸುರೇಶ್ ಎಂ., ಮುಖ್ಯೋಪಾಧ್ಯಾಯರು ಹಳೆ ವಿದ್ಯಾರ್ಥಿಗಳು, ಅಧಿಕಾರಿಗಳು, ಶಾಸಕರ ನೆರವಿನಿಂದ ಶಾಲೆಯ ಗತ ವೈಭವವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಜತೆಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಮಹದಾಸೆ ಹೊಂದಿದ್ದು, ಅದಕ್ಕೆ ಪೂರಕ ಪ್ರಯತ್ನ ಪ್ರಾರಂಭಿಸಲಾಗಿದೆ.
-ಸುರೇಶ್ ಎಂ., ಮುಖ್ಯೋಪಾಧ್ಯಾಯರು - ಚೈತ್ರೇಶ್ ಇಳಂತಿಲ