Advertisement

“ಅವರ್‌ ಬಿಟ್‌ ಇವರ್‌ ಬಿಟ್‌ ಇನ್ಯಾರು’

12:55 AM Mar 12, 2019 | Team Udayavani |

ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ ಸಮರ್ಥ ಅಭ್ಯರ್ಥಿ ಸಿಗುತ್ತಿಲ್ಲವಂತೆ. ಪಾರ್ಟಿ ಫ‌ಂಡ್‌ಗಾಗಿ ಎದುರು ನೋಡದೆ, ಚುನಾವಣೆ ವೆಚ್ಚ ಖರ್ಚು ಮಾಡಿ ಸ್ಪರ್ಧೆ ಮಾಡುವವರಿಗಾಗಿ ಹುಡುಕಾಟ ನಡೆಯುತ್ತಿದ್ದಂತೆ. 

Advertisement

ಮಾಜಿ ಸಚಿವ ರಾಮಲಿಂಗಾರೆಡ್ಡಿಯವರನ್ನು ಕಣಕ್ಕೆ ಇಳಿಸಲು ರಾಜ್ಯದ ಕೆಲವು ನಾಯಕರು ಮೆಗಾಪ್ಲ್ರಾನ್‌ ರೂಪಿಸಿದ್ದರಂತೆ. ಆದರೆ, ಅದರ ಸುಳಿವರಿತ ರಾಮಲಿಂಗಾರೆಡ್ಡಿಯವರು,”ಸಚಿವ ಸ್ಥಾನ ಕೊಡದಿದ್ದರೂ ಸರಿ, ನನಗೆ ಎಂಪಿ ಟಿಕೆಟ್‌ ಬೇಡ’ ಎಂದು ಕೈ ಮುಗಿದಿದ್ದಾರಂತೆ. ಹೀಗಾಗಿ, ಪ್ರಿಯಾಕೃಷ್ಣ ಅವರ ಹೆಸರು ತೇಲಿ ಬಿಡಲಾಗಿದೆಯಂತೆ. ಅವರೂ ಸಹ ಒಲ್ಲದ ಮನಸ್ಸಿನಲ್ಲಿದ್ದಾರಂತೆ. 

ಹೀಗಾಗಿ, “ಅವರ್‌ ಬಿಟ್‌ ಇವರ್‌ ಬಿಟ್‌ ಇನ್ಯಾರು’ ಎಂದು ಕಾಂಗ್ರೆಸ್‌ ನಾಯಕರು ತಲಾಷೆ ಮಾಡುತ್ತಿದ್ದಾರಂತೆ. ಬೆಂಗಳೂರು ಸೆಂಟ್ರಲ್‌ ಟಿಕೆಟ್‌ಗೆ ಪ್ರಯತ್ನಿಸುತ್ತಿರುವ ಪ್ರಭಾವಿ ನಾಯಕರಿಗೆ ದಕ್ಷಿಣ ಕ್ಷೇತ್ರದ ಟಿಕೆಟ್‌ ಕೊಡಬಹುದು ಎಂದು ಕೆಲವರು ಹೈಕಮಾಂಡ್‌ ಮುಂದೆ ಪ್ರಸ್ತಾಪಿಸಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next