Advertisement

ಕೋವಿಡ್ ನಿಂದಾಗಿ ಸ್ಥಗಿತಗೊಂಡಿದ್ದ ಅಂತಾರಾಜ್ಯ ಬಸ್‌ ಸಂಚಾರ ಪುನಾರಂಭ

11:26 AM Aug 27, 2020 | sudhir |

ಕೆಜಿಎಫ್: ಕೋವಿಡ್ ವೈರಸ್‌ ದಿಗ್ಬಂಧನ ನಂತರ ಸ್ಥಗಿತಗೊಂಡಿದ್ದ ಅಂತಾರಾಜ್ಯ ಬಸ್‌ ಸಂಚಾರ ಬುಧವಾರ ಪುನಾರಂಭವಾಗಿದ್ದು, ನಗರದ ಬಸ್‌ ನಿಲ್ದಾಣದಲ್ಲಿ ಆಂಧ್ರ ಪ್ರದೇಶದ ಬಸ್‌ಗಳು ಕಾಣಿಸಿಕೊಂಡವು.

Advertisement

ಕುಪ್ಪಂನಿಂದ ಕೆಜಿಎಫ್ ಸಂಚರಿಸುವ ಬಸ್‌ಗಳು ಬುಧವಾರ ಹಲವು ಬಾರಿ ಸಂಚರಿಸಿದವು. ಹೊಸದಾಗಿ ಬಸ್‌ ಸಂಚಾರ
ಪ್ರಾರಂಭವಾಗಿದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಅದೇ ರೀತಿ ಇಲ್ಲಿನ ಬಸ್‌ ಡಿಪೋವಿನಿಂದ ಗಡಿವರೆಗೂ
ಸಂಚರಿಸುತ್ತಿದ್ದ ರಾಜ್ಯದ ಕೆಎಸ್‌ಆರ್‌ಟಿಸಿ ಬಸ್‌ಗಳು ಶಾಂತಿಪುರ ಮತ್ತು ವಿಕೋಟೆ ಊರಿನೊಳಗೆ ಹೋಗಿ ವಾಪಸ್‌ ಬಂದವು.

ಬಸ್‌ಗೆ ಹತ್ತುವಾಗ ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸಲಿಲ್ಲ. ಈಗಾಗಲೇ ಗಡಿ ಭಾಗದಲ್ಲಿರುವ ಎಲ್ಲಾ
ಚೆಕ್‌ಪೋಸ್ಟ್‌ಗಳನ್ನು ತಾಲೂಕು ಆಡಳಿತ ವಾಪಸ್‌ ಪಡೆದಿದೆ. ಇಷ್ಟು ದಿನಗಳ ಕಾಲ ನಿರ್ಬಂಧಿತ ಸಾರಿಗೆ ವ್ಯವಸ್ಥೆ ಈಗ
ಸುಗಮಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next