Advertisement

ಬಂಕ್‌ ನಿರ್ಮಾಣ ಸ್ಥಗಿತಕ್ಕೆ ಸಂಘಟನೆಗಳ ಒತ್ತಾಯ

04:29 PM Oct 22, 2019 | Suhan S |

ಮಧುಗಿರಿ: ಮಧುಗಿರಿಯ ಸಿದ್ದಾಪುರ ಕೆರೆಯ ಬಳಿ ನಿರ್ಮಿಸುತ್ತಿರುವ ಪೆಟ್ರೋಲ್‌ ಬಂಕ್‌ ನಿರ್ಮಾಣ ಸ್ಥಗಿತಗೊಳಿಸುವಂತೆ ಹಲವು ಸಂಘ ಸಂಸ್ಥೆಗಳ ಕಾಯಕರ್ತರು ಒತ್ತಾಯಿಸಿದರು.

Advertisement

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪೆಟ್ರೋಲ್‌ ಬಂಕ್‌ ಮಾಲಿಕ ರವಿಕಿರಣ್‌, ಈ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದ್ದು, ಆರೋಪಗಳಲ್ಲಿ ಹುರುಳಿಲ್ಲ ಎಂದು ತಿರುಗೇಟು ನೀಡಿದ್ದಾರೆ.ಪ್ರತಿಭಟನಾಕಾರರು ಸಲ್ಲಿಸಿರುವ ಮನವಿ ಪತ್ರದಲ್ಲಿ, ಪಟ್ಟಣಕ್ಕೆ ಕುಡಿಯುವ ನೀರೋದಗಿಸುವ ಸಿದ್ದಾಪುರ ಕೆರೆ ಬಳಿ  ಯಲ್ಲಿ ಖಾಸಗಿ ಜಮೀನಿನಲ್ಲಿ ನಿರ್ಮಾಣ  ಗೊಳ್ಳುತ್ತಿರುವ ಬಂಕ್‌ನಿಂದ ಪೆಟ್ರೋಲಿ ಯಂ ಉತ್ಪನ್ನ ಸೋರಿಕೆ ಯಾದರೆ ಸಮಸ್ಯೆ ಹೆಚ್ಚಾಗಲಿವೆ ಎಂದು ಒತ್ತಾಯಿಸಿ ಗ್ರೇಡ್‌ -2 ತಹಶೀ ಲ್ದಾರ್‌ಗೆ ಮನವಿ ಸಲ್ಲಿಸಿದರು.

ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ಮಾತನಾಡಿದರು. ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ, ಕರವೇ ಶಿವ ಕುಮಾರ್‌, ಜಯ ಕರ್ನಾಟಕ ಅಧ್ಯಕ್ಷ ಚಿಕ್ಕ ಕಾಮಯ್ಯ, ದೇವರಾಜ, ಮುಖಂಡ ರವಿಕಾಂತ್‌, ನಾಗಾರ್ಜುನ, ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next