Advertisement

Goa; ಛತ್ರಪತಿ ಶಿವಾಜಿ ಮಹಾರಾಜರ ಕುದುರೆ ಸವಾರಿ ಪ್ರತಿಮೆ ತೆರವಿಗೆ ಆದೇಶ

04:22 PM Jun 20, 2023 | Team Udayavani |

ಪಣಜಿ: ಗೋವಾದ  ಕಲಂಗುಟ್‍ನ ಪೊಲೀಸ್ ಠಾಣೆಯ ಬಳಿ ಸ್ಥಾಪಿಸಿದ್ದ  ಛತ್ರಪತಿ ಶಿವಾಜಿ ಮಹಾರಾಜರ ಕುದುರೆ ಸವಾರಿ ಪ್ರತಿಮೆಯನ್ನು 10 ದಿನಗಳಲ್ಲಿ ತೆಗೆದುಹಾಕುವಂತೆ ಕಲಂಗುಟ್ ಪಂಚಾಯತ್ ಸಂಬಂಧಿಸಿದ ಶಿವ ಸ್ವರಾಜ್ಯ-ಕಲಂಗುಟ್ ಸಂಘಟನೆಗೆ ಆದೇಶಿಸಿದೆ.

Advertisement

ಈ ಕುರಿತು ಹೆಚ್ಚಿನ ಮಾಹಿತಿ ಏನೆಂದರೆ, ಕಲಂಗುಟ್-ಸಾಳಗಾಂವ್ ರಸ್ತೆಯಲ್ಲಿರುವ ಕಲಂಗುಟ್ ಪೊಲೀಸ್ ಠಾಣೆಯ ಜಂಕ್ಷನ್‍ನಲ್ಲಿ ಶಿವಸ್ವರಾಜ್ಯ ಕಲಂಗುಟ್ ಸಂಘಟನೆಯ ವತಿಯಿಂದ ಛತ್ರಪತಿ ಶುವಾಜಿ ಮಹಾರಾಜರ ಕುದುರೆ ಸವಾರಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಕಲಂಗುಟ್ ಪಂಚಾಯತ್ ಶಿವ ಸ್ವರಾಜ್ಯ-ಕಲಂಗುಟ್ ಸಂಘಟನೆಗೆ 10 ದಿನಗಳಲ್ಲಿ ಈ  ಪ್ರತಿಮೆಯನ್ನು ತೆಗೆದುಹಾಕುವಂತೆ ಆದೇಶವನ್ನು ನೀಡಿದೆ.

ಪ್ರತಿಮೆ ಸ್ಥಾಪನೆಗೆ ಪೂರ್ವಾನುಮತಿ ಪಡೆದಿಲ್ಲ. ಪ್ರತಿಮೆ ಅಕ್ರಮವಾಗಿದೆ ಎಂದು ಕಲಂಗುಟ್ ಪಂಚಾಯತ್ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

10 ದಿನದೊಳಗೆ ಪ್ರತಿಮೆ ತೆರವು ಮಾಡದಿದ್ದಲ್ಲಿ ಅಗತ್ಯ ಕ್ರಮ ಜರುಗಿಸಿ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಕಲಂಗುಟ್ ಪಂಚಾಯತಿ ಹೊರಡಿಸಿರುವ ಆದೇಶದಲ್ಲಿ ಪಂಚಾಯಿತಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next