Advertisement

ಕಾಮಗಾರಿ ತತ್‌ಕ್ಷಣ ಪೂರ್ಣಗೊಳಿಸಲು ಆದೇಶ

09:53 PM May 31, 2019 | Team Udayavani |

ಮಹಾನಗರ: ಮಳೆಗಾಲಕ್ಕೆ ದಿನಗಣನೆ ಮಾತ್ರ ಬಾಕಿ ಉಳಿದಿರುವಂತೆ, ನಗರದ ಕೆಲವೆಡೆ ನಡೆದಿರುವ ಅರೆಬರೆ ಕಾಮಗಾರಿಗಳು ಅರ್ಧದಲ್ಲಿ ಬಾಕಿಯಾದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕೊನೆಗೂ ಎಚ್ಚೆತ್ತು ಕಾಮಗಾರಿಗಳನ್ನು ಬೇಗನೆ ಮುಗಿಸುವಂತೆ ತಾಕೀತು ಮಾಡಿದೆ.

Advertisement

ನಗರದ ಕೆಲವೆಡೆ ಅರ್ಧದಲ್ಲಿ ಬಾಕಿಯಾಗಿರುವ ಕಾಮಗಾರಿಗಳು ಮಳೆ ಗಾಲದಲ್ಲಿ ಸಮಸ್ಯೆ ಆಗಲಿದೆ ಎಂದು “ಉದಯವಾಣಿ ಸುದಿನ’ ಈ ಹಿಂದೆ ಎಚ್ಚರಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಪಾಲಿಕೆ ಕೆಲವು ಅರೆಬರೆ ಕಾಮಗಾರಿ ತತ್‌ಕ್ಷಣವೇ ಪೂರ್ಣಗೊಳಿಸಲು ಸೂಚಿಸಿದ್ದರು. ಇದರಂತೆ ಕಂಕನಾಡಿ, ಬಿಜೈ ಸೇರಿದಂತೆ ಕೆಲವು ಭಾಗದಲ್ಲಿದ್ದ ಸಮಸ್ಯೆಗಳಿಗೆ ತಾತ್ಕಾ ಲಿಕ ಮುಕ್ತಿ ನೀಡಲಾಗಿದೆ.

ಬಿಜೈ ಸರ್ಕಲ್‌ನಿಂದ ಬಿಜೈ ಚರ್ಚ್‌ ಗೇಟ್‌ವರೆಗೆ ಕಾಮಗಾರಿ ನಡೆಸಿದ ಅನಂತರ ಮಣ್ಣನ್ನು ರಸ್ತೆ ಬದಿಯಲ್ಲಿ ಸುರಿದಿದ್ದರು. ಇದರ ಪರಿಣಾಮ ಮಳೆಗೆ ಕೆಸರು ನೀರು ನಿಲ್ಲುವುದು ಖಂಡಿತ ಎಂದು ವರದಿ ಮಾಡಲಾಗಿತ್ತು. ಸಂಬಂಧಪಟ್ಟವರು ಎಚ್ಚೆತ್ತುಕೊಂಡ ತಾತ್ಕಾಲಿಕವಾಗಿ ಮಣ್ಣನ್ನು ಸರಿಪಡಿಸಿದ್ದಾರೆ. ಆದರೆ, ಇದು ಕಿರಿಕಿರಿ ತರುವ ಸಾಧ್ಯತೆ ಇಲ್ಲ ಎನ್ನುವಂತಿಲ್ಲ!

ಸುದಿನ ಪಾಲಿಕೆ ಗಮನಸೆಳೆದಿತ್ತು
ಕಂಕನಾಡಿಯ ಫಾದರ್‌ ಮುಲ್ಲರ್‌ ಆಸ್ಪತ್ರೆಯ ಮುಂಭಾಗದಲ್ಲಿರುವ ರಿಕ್ಷಾ ಪಾರ್ಕ್‌ ಸಮೀಪ ಬೃಹತ್‌ ಹೊಂಡ ತೆಗೆದು ಅದನ್ನು ಮುಚ್ಚದೆ ಕೆಲವು ತಿಂಗಳಿನಿಂದ ಹಾಗೆಯೇ ಬಿಡಲಾಗಿತ್ತು. ಇದು ಮಳೆಗೆ ಇನ್ನೊಂದು ಅಪಾಯ ಆಹ್ವಾನಿಸಿದಂತಿದೆ ಎಂದು ಸುದಿನ ಪಾಲಿಕೆಯ ಗಮನಸೆಳೆದಿತ್ತು. ನೀರಿನ ಪೈಪ್‌ಲೈನ್‌ಗಾಗಿ ಪಾಲಿಕೆಯವರು ಹೊಂಡ ಮಾಡಿ ಅದರ ಮಣ್ಣನ್ನು ರಸ್ತೆಯ ಬದಿಯಲ್ಲಿ ಹಾಕಿ ಸಮಸ್ಯೆ ಸೃಷ್ಟಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಇದೀಗ ಎಚ್ಚೆತ್ತುಕೊಂಡ ಪಾಲಿಕೆ ಹೊಂಡಕ್ಕೆ ಮಣ್ಣು ಹಾಕಿ ಮುಚ್ಚಿದ್ದಾರೆ. ಆದರೆ, ಅದರ ಪಕ್ಕದಲ್ಲಿ ಸ್ವಲ್ಪ ಮಣ್ಣನ್ನು ಹಾಗೆಯೇ ಬಿಟ್ಟಿರುವುದು ಮಳೆಗಾಲಕ್ಕೆ ಸಮಸ್ಯೆ ಆಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next