Advertisement

Orchid Flower: ಇಂದಿನಿಂದ ಮತ್ತೆ ಆರ್ಕಿಡ್‌ ಪ್ರದರ್ಶನ

08:27 AM Oct 28, 2023 | Team Udayavani |

ಬೆಂಗಳೂರು: ನಗರ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಟೆರಸ್‌ ಗಾರ್ಡನ್‌, ಹೈಡ್ರೋಪೋನಿಕ್‌ಗೆ ಹೆಚ್ಚು ಆಸಕ್ತಿ ತೋರಿಸಿದರೂ, ಆರ್ಕಿಡ್‌ಗಳ ವ್ಯಾಮೋಹ ಕಡಿಮೆಯಾಗಿಲ್ಲ. ಮನೆಗಳಲ್ಲಿ ಮಾತ್ರವಲ್ಲದೆ ಐಟಿಬಿಟಿ ಕಚೇರಿ, ಬೃಹತ್‌ ಹೋಟೆಲ್‌, ಮದುವೆ, ಸಮಾರಂಭಗಳಲ್ಲಿ ಆರ್ಕಿಡ್‌ ಬಳಸುವುದು ಹೆಚ್ಚಾಗಿದ್ದು, ಬೇಡಿಕೆಯೂ ಹೆಚ್ಚಾಗಿದೆ.

Advertisement

ಅತಿ ಹೆಚ್ಚು ಹೂವುಗಳನ್ನು ಬಿಡುವ ಸಸ್ಯ ಕುಟುಂಬಗಳಲ್ಲಿ ಒಂದಾಗಿರುವ ಆರ್ಕಿಡ್‌, ವಿಶ್ವಾದ್ಯಂತ ಸುಮಾರು 30 ಸಾವಿರ ಜಾತಿಗಳನ್ನು ಹೊಂದಿದೆ. ಆರ್ಕಿಡ್‌ಗಳು ಸುಂದರವಾಗಿದ್ದು, ಅಪರೂಪವಾಗಿರುತ್ತವೆ ಹಾಗೂ ದೀರ್ಘಾಯುಷ್ಯವುಳ್ಳ ಸಸ್ಯಗಳಾಗಿವೆ. ಈ ಸಸ್ಯಗಳು ಮೊದಲು ಕಾಡಿನಲ್ಲಿ ಅಂದರೆ, ಪಶ್ಚಿಮ ಘಟ್ಟಗಳಲ್ಲಿ ಬೆಳೆಯುತ್ತಿದ್ದವು. ಆದರೆ, ಈಗ ಹಸಿರು ಮನೆಯಲ್ಲಿ ಹಾಗೂ ಹೈಬ್ರಿಡ್‌ ಜಾತಿಯ ಸಸ್ಯಗಳನ್ನು ಮನೆಗಳಲ್ಲಿಯೂ ಬೆಳೆಯಬಹುದು.

ಆರ್ಕಿಡ್‌ ಸೊಸೈಟಿ ಆಫ್ ಕರ್ನಾಟಕದಿಂದ ಪ್ರತಿ ವರ್ಷ ನಡೆಸುತ್ತಿದ್ದ ಆರ್ಕಿಡ್‌ ಪ್ರದರ್ಶನವು ಕೋವಿಡ್‌ ಕಾರಣದಿಂದಾಗಿ 4 ವರ್ಷಗಳ ಕಾಲ ಸ್ಥಗಿತಗೊಳಿಸಿದ್ದ ಪ್ರದರ್ಶನ ಈ ಬಾರಿ ನಡೆಯು ತ್ತಿದೆ. ಆರ್ಕಿಡ್‌ ಪ್ರಿಯರೇ, ಬಣ್ಣ-ಬಣ್ಣದ ವಿವಿಧ ಹೂ ಗಿಡಗಳನ್ನು ನೋಡಬೇಕೇ ಅಥವಾ ಬೆಳೆಯ ಬೇಕು ಅಥವಾ ಅವುಗಳ ಬಗ್ಗೆ ತಿಳಿದು ಕೊಳ್ಳ ಬೇಕು ಎಂದರೆ, ಇದೇ ವಾರಾಂತ್ಯದ ಎರಡೂ ದಿನಗಳ ಕಾಲ ಅ.28 ಮತ್ತು 29ರಂದು ನಗರದ ಲ್ಯಾಂಗ್‌ ಫೋರ್ಡ್‌ ರಸ್ತೆಯಲ್ಲಿರುವ ಸೇಂಟ್‌ ಜೋಸೆಫ್‌ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಡಿ.

ಈ ಪ್ರದರ್ಶನದಲ್ಲಿ ಡೆಂಡ್ರೋಬಿಯಮ್‌, ಕ್ಯಾಟಿÉಯಾಸ್‌, ಫ‌ಲೇನೊಪ್ಸಿಸ್‌, ಕ್ಯಾಟ್ರಿಯಾ, ರ್‍ಯಾಂಡಾ, ಆನ್‌ಸಿàಡಿಯಂ, ಗ್ರಮಟೋμಲಂ ಸೇರಿದಂತೆ ಸುಮಾರು 60 ನೈಸರ್ಗಿಕ ಆರ್ಕಿಡ್‌ ಗಳು ಹಾಗೂ 70 ಹೈಬ್ರಿಡ್‌ ಪ್ರಭೇದಗಳನ್ನು ಒಟ್ಟು 100ಕ್ಕೂ ಹೆಚ್ಚು ಆರ್ಕಿಡ್‌ ಪ್ರಭೇದಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

Advertisement

2005ರಲ್ಲಿ ಪ್ರಾರಂಭವಾದ ಆರ್ಕಿಡ್‌ ಸೊಸೈಟಿ ಆಫ್ ಕರ್ನಾಟಕವು ಕೇವಲ 15 ಸದಸ್ಯರನ್ನು ಹೊಂದಿತ್ತು. ಪ್ರಸ್ತುತ 650ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಬಹುತೇಕರು ಕರ್ನಾಟಕ ದವರೇ ಇದ್ದಾರೆ. ಉಳಿದಂತೆ ಪುಣೆ, ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ವೈದ್ಯರು, ಐಟಿ ವೃತ್ತಿಪರರು, ನಿವೃತ್ತಿ ಪಡೆದವರು, ಉಪನ್ಯಾಸಕರು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ.

2012ರಲ್ಲಿ ಆರಂಭಿಸಿದ ಆರ್ಕಿಡ್‌ ಪ್ರದರ್ಶನವು ಇದೀಗ ತನ್ನ 8ನೇ ಆವೃತ್ತಿಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಿಶ್ವಾದ್ಯಂತದ ಕೆಲವು ಅತ್ಯಂತ ಆಸಕ್ತಿದಾಯಕ ವಿವಿಧ ಆರ್ಕಿಡ್‌ ಪ್ರಭೇದಗಳು ಮತ್ತು ಅತ್ಯಂತ ಮೋಡಿಮಾಡುವ ಪುಷ್ಪಯುಕ್ತ ಮಿಶ್ರತಳಿಗಳು ಒಂದೇ ಸೂರಿನಡಿ ಪ್ರದರ್ಶನಕ್ಕೆ ಸಿದ್ಧವಾಗಿದ್ದು, ಆರ್ಕಿಡ್‌ಗಳನ್ನು ಬೆಳೆಸುವ ಹವ್ಯಾಸಿಗಳನ್ನು ಪ್ರೇರೇಪಿಸಲಾಗುತ್ತದೆ.

ಜತೆಗೆ ಆರ್ಕಿಡ್‌ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸಂದೇಶ ಹರಡುವ ಪ್ರಯತ್ನದಲ್ಲಿ ಪುಸ್ತಕಗಳು, ಪೋಸ್ಟರ್‌ಗಳನ್ನು ಪ್ರಸ್ತುತಪಡಿಸಲಾಗಿದೆ. ವಿವಿಧ ಲೇಖಕರ ಆರ್ಕಿಡ್‌ ಕುರಿತು ಬರೆದಿರುವ ಪುಸ್ತಕಗಳನ್ನು ಮಾರಾಟಕ್ಕಿಡಲಾಗಿದ್ದು, ಇಲ್ಲಿ ಆರ್ಕಿಡ್‌ ಬೆಳೆಯುವ ರೀತಿ ಹಾಗೂ ಪ್ರಾಯೋಗಿಕ ಸಲಹೆಗಳೊಂದಿಗೆ ಬೆಳೆಗಾರರಿಗೆ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದು ಸೊಸೈಟಿ ಅಧ್ಯಕ್ಷ ಡಾ| ಕೆ.ಎಸ್‌. ಶಶಿಧರ್‌ ಶಾಸ್ತ್ರೀ ತಿಳಿಸುತ್ತಾರೆ.

ನಾಲ್ಕು ವರ್ಷಗಳ ನಂತರ ಉದ್ಯಾನ ನಗರಿಯಲ್ಲಿ ಇಂದು ಮತ್ತು ನಾಳೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಆರ್ಕಿಡ್‌ ಪ್ರದರ್ಶನ ನಡೆಯಲಿದ್ದು, ಕರ್ನಾಟಕ ಸೇರಿದಂತೆ ತಮಿಳುನಾಡು ಮತ್ತು ಕೇರಳದ ವಿವಿಧ ನರ್ಸರಿಗಳಿಂದ ಗಿಡಗಳನ್ನು ಮಾರಾಟಕ್ಕೆ ಇಡಲಾಗಿದೆ. ಈ ಪ್ರದರ್ಶನವು ಯುವ ಮನಸ್ಸುಗಳು ಮತ್ತು ವಿದ್ಯಾರ್ಥಿಗಳನ್ನು ಪ್ರಕೃತಿ ಮತ್ತು ಅದರ ಸಂರಕ್ಷಣೆಯನ್ನು ಪೋಷಿಸಲು ಮತ್ತು ಕಾಳಜಿ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ● ಡಾ|ಕೆ.ಎಸ್‌. ಶಶಿಧರ್‌ ಶಾಸ್ತ್ರೀ, ಅಧ್ಯಕ್ಷರು, ಆರ್ಕಿಡ್‌ ಸೊಸೈಟಿ ಆಫ್ ಕರ್ನಾಟಕ

● ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next