Advertisement

Jharkhand: 4 ವರ್ಷ ಬಳಿಕ ಜಾರ್ಖಂಡ್‌ಗೆ ಪ್ರತಿಪಕ್ಷ ನಾಯಕನ ನೇಮಕ

09:08 PM Oct 17, 2023 | Team Udayavani |

ರಾಂಚಿ: ನಾಲ್ಕು ವರ್ಷಗಳ ನಂತರ ಜಾರ್ಖಂಡ್‌ ವಿಧಾನಸಭೆಗೆ ಪ್ರತಿಪಕ್ಷ ನಾಯಕನನ್ನು ಬಿಜೆಪಿ ವರಿಷ್ಠರು ನೇಮಿಸಿದ್ದಾರೆ. ಚಂದಂಕಿಯರಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಅಮರ್‌ ಬಾವುರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ,

Advertisement

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಳೆದು ಐದು ತಿಂಗಳು ಪೂರ್ತಿಯಾದರೂ ಪ್ರತಿಪಕ್ಷ ನಾಯಕನನ್ನು ನೇಮಕ ಮಾಡದೇ ಇರುವ ಬಗ್ಗೆ ಹಲವು ರೀತಿಯ ಚರ್ಚೆಗಳು ನಡೆದಿವೆ. ಜತೆಗೆ ಒಂದು ಹಂತದ ಅಧಿವೇಶನ ಕೂಡ ನಡೆದಿದೆ.

2019ರ ಡಿಸೆಂಬರ್‌ನಿಂದ ಜಾರ್ಖಂಡ್‌ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ತೆರವಾಗಿಯೇ ಉಳಿದಿತ್ತು. ಮಾಜಿ ಸಿಎಂ ಬಾಬುಲಾಲ್‌ ಮರಾಂಡಿ ಹಂಗಾಮಿ ನೆಲೆಯಲ್ಲಿ ಪ್ರತಿಪಕ್ಷ ನಾಯಕನಂತೆಯೇ ಕಾರ್ಯನಿರ್ವಹಿಸುತ್ತಿದ್ದರು. ಈ ಸ್ಥಾನಕ್ಕೆ ಜಾರ್ಖಂಡ್‌ ಬಿಜೆಪಿ ಪರಿಶಿಷ್ಟ ಜಾತಿ ಘಕಟದ ಅಧ್ಯಕ್ಷರಾಗಿರುವ ಬಾವುರಿ ಅವರನ್ನು ನೇಮಿಸಲಾಗಿದೆ.

ಮುಂದಿನ ವರ್ಷ ಜಾರ್ಖಂಡ್‌ ವಿಧಾನಸಭೆ ಚುನಾವಣೆ ಜರುಗಲಿದೆ. ಆದಿವಾಸಿ-ದಲಿತರು-ಒಬಿಸಿ ಸಾಮಾಜಿಕ ಸಂಯೋಜನೆಯಡಿ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಈ ನೇಮಕ ನಡೆಸಿದ್ದಾರೆ. ಜಾರ್ಖಂಡ್‌ನ‌ ಬಿಜೆಪಿ ಅಧ್ಯಕ್ಷರನ್ನಾಗಿ ಬಾಬುಲಾಲ್‌ ಮರಾಂಡಿ ಅವರನ್ನು ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next