Advertisement

ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್‌ ಕಾಯ್ದೆ ವಿರೋಧಿಸಿ ಧರಣಿ

03:42 PM Jan 26, 2020 | Suhan S |

ಗದಗ: ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಕಾಯ್ದೆಗಳು ಜನವಿರೋಧಿಯಾಗಿದ್ದು, ಕೂಡಲೇ ಅವುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಜಿಲ್ಲಾ ಘಟಕದಿಂದ ಜಿಲ್ಲಾಡಳಿತದ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.

Advertisement

ಈ ಕುರಿತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಸಿಎಎ ತಿದ್ದುಪಡಿ ಕಾಯ್ದೆ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುತ್ತದೆ. ಅನುಚ್ಛೇದ 14ರ ಅನುಸಾರ ಕಾನೂನಿನಡಿ ಎಲ್ಲರೂ ಸಮಾನರು.ಆದರೆ, ಈ ಕಾಯ್ದೆಯಿಂದ ಸಮಾನತೆಯ ಹಕ್ಕಿಗೆ ಚ್ಯುತಿಯಾಗುತ್ತದೆ. ಭಾರತದ ನೆರೆ ದೇಶಗಳಾದ ಪಾಕಿಸ್ತಾನದಲ್ಲಿ ಅಹ್ಮದೀಯರು, ಶ್ರೀಲಂಕಾದಲ್ಲಿತಮಿಳರು, ಮಯನ್ಮಾರನಲ್ಲಿ ರೋಹಿಂಗ್ಯಾ,ಅಫ್ಘಾನಿಸ್ಥಾನದಲ್ಲಿ ಹಜಾರ ಸಮುದಾಯಗಳು ಅಲ್ಪಸಂಖ್ಯಾತರಾಗಿದ್ದು, ಅವರನ್ನು ಪರಿಗಣಿಸಿಲ್ಲ.ಇದರಿಂದಾಗಿ ಅಕ್ರಮ ವಲಸಿಗರಿಗೆ ಪೌರತ್ವದೊರೆಯದೇ ನಿರಾಶ್ರಿತರ ಶಿಬಿರಗಳಲ್ಲಿ ನರಳುವಂತಾಗುತ್ತದೆ ಎಂದು ದೂರಿದರು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಧರ್ಮದ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾದವರು ಎಂದು ಸಿಎಎ ಕಾಯ್ದೆಯಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ.

ಆದರೆ ಬಹಿರಂಗವಾಗಿ ಮೋದಿ, ಅಮಿತ್‌ ಶಾ ಮತ್ತು ಬಿಜೆಪಿಯವರು ಧರ್ಮದ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾದವರು ಎಂದು ತಪ್ಪಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಸಿಎಎ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ.  ಆದರೆ ಎನ್‌ಆರ್‌ಸಿ ಮೂಲಕ ಇಲ್ಲಿ ನೂರಾರು ವರ್ಷಗಳಿಂದ ಬದುಕಿರುವ ತಳ ಸಮುದಾಯಗಳು, ಮುಸ್ಲಿಮರು, ಆದಿವಾಸಿಗಳು, ಅಲೆಮಾರಿಗಳ ಪೌರತ್ವವನ್ನು ಕಸಿದುಕೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮಾನವಿಯತೆ ವಿರೋಧಿಯಾದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಎನ್ನುವ ಕರಾಳ ಶಾಸನಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಾಗರಾಜ ಗೋಕಾವಿ, ಮುತ್ತಪ್ಪ ಭಜಂತ್ರಿ, ಪ್ರಕಾಶ ಕಲ್ಲೇಕನವರ, ಪ್ರಕಾಶ ಕಮಡೊಳ್ಳಿ, ಬಸವರಾಜ ಈರಣ್ಣವರ, ಎಲ್‌. ನಾರಾಯಣಸ್ವಾಮಿ, ವಿಜಯ ಮುಳಗುಂದ,ವಿಜಯ ಕಲ್ಮನಿ, ದೇವಪ್ಪ ಲಿಂಗದಾಳ, ಮಾರುತಿ ಅಂಗಡಿ, ಕೆಂಚಪ್ಪ ಮ್ಯಾಗೇರಿ, ಚಂದ್ರು ಹರಿಜನ, ಶರೀಫ ಬಿಳೆಯಲಿ, ಪರಶುರಾಮ ಕಾಳೆ, ಯೂಸೂಫ್‌ ನಮಾಜಿ, ಶಾಕೀರ್‌ ಕಾತರಕಿ, ಇಸ್ಮಾಯಿಲ್‌ ಡಂಬಳ, ಮುನ್ನಾ ರೇಶ್ಮಿ, ದ್ಯಾಮಣ್ಣ ಬಿಂಕದಕಟ್ಟಿ, ಮಂಜು ಲಿಂಗದಾಳ, ಮಹಮ್ಮದ್‌ ಶಾಲಗಾರ, ಸುಧೀರ ಬಿಜಾಪುರ, ದಾವಲ್‌ ಮುಳಗುಂದ, ಶೌಕತಅಲಿ ಕಾತರಕಿ, ಅಕºರಸಾಬ್‌ ಬಬರ್ಚಿ, ಬರಕತಅಲಿ ಮುಲ್ಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next