Advertisement

13 ಸಾವು ಕಂಡ ತೂತುಕುಡಿ ಹಿಂಸೆ: ಇಂದು ತಮಿಳು ನಾಡು ಬಂದ್‌

11:44 AM May 25, 2018 | Team Udayavani |

ಚೆನ್ನೈ : ಹದಿಮೂರು ಅಮಾಯಕ ಜೀವಗಳನ್ನು ಬಲಿ ಪಡೆದ ತೂತುಕುಡಿ ಹಿಂಸೆಯನ್ನು ಪ್ರತಿಭಟಿಸಿ, ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರ ರಾಜೀನಾಮೆಯನ್ನು ಆಗ್ರಹಿಸಿ, ಡಿಎಂಕೆ ನೇತೃತ್ವದ ವಿರೋಧ ಪಕ್ಷಗಳು ನೀಡಿರುವ ಕರೆಯನ್ವಯ ತಮಿಳು ನಾಡಿನಲ್ಲಿ ಇಂದು ಬಂದ್‌ ನಡೆಯುತ್ತಿದೆ. 

Advertisement

ಡಿಎಂಕೆ  ಮತ್ತು ಮಿತ್ರ ಪಕ್ಷಗಳಾದ ಕಾಂಗ್ರೆಸ್‌, ಐಯುಎಂಎಲ್‌, ಎಂಡಿಎಂಕೆ, ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಎಂಎಂಕೆ ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ನೆರೆಯ ಪುದುಚೇರಿಯಲ್ಲಿ ಪ್ರತಿಭಟನೆ, ಪ್ರದರ್ಶನ ನಡೆಸಿದವು. ರಾಜ್ಯದ ಸಿಎಂ ಕೆ ಪಳನಿಸ್ವಾಮಿ ಅವರ ರಾಜೀನಾಮೆಯನ್ನು ಆಗ್ರಹಿಸಲಾಯಿತು.

ಮಾಜಿ ಚೆನ್ನೈ ಮೇಯರ್‌ ಮತ್ತು ಡಿಎಂಕೆ ನಾಯಕ ಎಂ ಸುಬ್ರಮಣಿಯನ್‌, ಪಕ್ಷದ ರಾಜ್ಯಸಭೆ ಸಂಸದೆ ಕನಿಮೋಳಿ, ವಿಸಿಕೆ ಮುಖ್ಯಸ್ಥ ತಿರುಮವಲನ್‌, ಎಂಎಂಕೆ ನಾಯಕ ಎಂ ಎಚ್‌ ಜವಾಹಿರುಲ್ಲ ಮುಂತಾದ ನಾಯಕರು ಪ್ರತಿಭಟನ ಪ್ರದರ್ಶನದಲ್ಲಿ ಪಾಲ್ಗೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next