Advertisement

ಆಪರೇಷನ್‌ ಹಸ್ತಕ್ಕೆ ನಾವೂ ಸಿದ್ಧ: ಸತೀಶ ಜಾರಕಿಹೊಳಿ

11:21 PM May 13, 2019 | Lakshmi GovindaRaj |

ಬೆಳಗಾವಿ: “ಬಿಜೆಪಿ ನಾಯಕರ ಆಪರೇಷನ್‌ಗೆ ಪ್ರತಿಯಾಗಿ ನಾವೂ ಆಪರೇಷನ್‌ ಹಸ್ತ ಮಾಡಲು ಸಿದ್ಧ. ನಮಗೂ ಅಂತಹ ಶಕ್ತಿಯಿದೆ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರ ಹೆಸರು ಈಗಲೇ ಹೇಳುವುದಿಲ್ಲ. ಸಮಯ ಬಂದಾಗ ಬಹಿರಂಗ ಪಡಿಸುತ್ತೇವೆ. ಶಾಸಕ ಉಮೇಶ ಕತ್ತಿ ಕಾಂಗ್ರೆಸ್‌ ಸಂಪರ್ಕದ ಬಗ್ಗೆ ಈಗಲೇ ಹೇಳಲ್ಲ. ಕೆಲ ದಿನ ಕಾದು ನೋಡಿ. ಅನಿವಾರ್ಯ ಪರಿಸ್ಥಿತಿ ಎದುರಾದರೆ 24ರಂದು ಎಲ್ಲವನ್ನೂ ಹೇಳುತ್ತೇನೆ ಎಂದರು.

ಶಾಸಕ ರಮೇಶ ಜಾರಕಿಹೊಳಿ ಜತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ರಮೇಶ ಜತೆ ಕೆಲ ಶಾಸಕರು ಸಂಪರ್ಕದಲ್ಲಿರುವುದು ನಿಜ. ಆದರೆ ಇದರಿಂದ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಸಂಪರ್ಕದಲ್ಲಿದ್ದವರೆಲ್ಲ ಅವರ ಜತೆಗೆ ಹೋಗುತ್ತಾರೆ ಎಂಬುದು ಅರ್ಥವಿಲ್ಲದ ಮಾತು ಎಂದರು.

ರಮೇಶ ಜಾರಕಿಹೊಳಿ ಈಗಾಗಲೇ ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ. ಬೆಳಗಾವಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ರಮೇಶ ಹಾಗೂ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಒಂದಾಗಿ ಕೆಲಸ ಮಾಡಿದ್ದಾರೆ.

ಒಂದು ವೇಳೆ ರಮೇಶ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರೆ ಆಗ ನಾವು ಗೋಕಾಕದಲ್ಲಿ ಕಾಂಗ್ರೆಸ್‌ ಪಕ್ಷ ಕಟ್ಟಬೇಕಾಗುತ್ತದೆ. ನಮ್ಮ ಕುಟುಂಬದಲ್ಲಿ ಯಾರೂ ಹುಳಿ ಹಿಂಡುವ ಕೆಲಸ ಮಾಡುತ್ತಿಲ್ಲ. ಆದರೆ ರಾಜಕೀಯ ಸಂಬಂಧವೇ ಬೇರೆ; ಪಕ್ಷವೇ ಬೇರೆ ಎಂದರು.

Advertisement

2028ಕ್ಕೆ ಶಾಸಕಿ ಲಕ್ಷ್ಮಿ ಹೆಬ್ಟಾಳಕರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೂಡಲಸಂಗಮ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸಿಎಂ ಆದರೆ ಒಳ್ಳೆಯದೇ, ಆದರೆ ಯಾವ ಪಕ್ಷದಿಂದ ಸಿಎಂ ಆಗುತ್ತಾರೋ ಗೊತ್ತಿಲ್ಲ.
-ಸತೀಶ ಜಾರಕಿಹೊಳಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next