Advertisement

ಬಸ್ಸುಗಳ ಕರ್ಕಶ ಹಾರ್ನ್ ವಿರುದ್ಧ ಕಾರ್ಯಾಚರಣೆ

06:30 AM Mar 11, 2018 | |

ಮಂಗಳೂರು: ನಗರದಲ್ಲಿ ಕರ್ಕಶ ಹಾರ್ನ್ ಬಳಸಿ ಸಂಚರಿಸುತ್ತಿದ್ದ 30ಕ್ಕೂ ಸಿಟಿ ಮತ್ತು ಸರ್ವಿಸ್‌ ಬಸ್‌ಗಳ ವಿರುದ್ಧ ಟ್ರಾಫಿಕ್‌ ಪೊಲೀಸರು ಶನಿವಾರ  ಕಾರ್ಯಾಚರಣೆ ನಡೆಸಿ, ಹಾರ್ನ್ ತೆಗೆದು ಹಾಕಿ ದಂಡ ವಿಧಿಸಿದ್ದಾರೆ.

Advertisement

ಶುಕ್ರವಾರ ಫೋನ್‌-ಇನ್‌ ಕಾರ್ಯಕ್ರಮ ದಲ್ಲಿ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ  ಪೊಲೀಸರು ನಗರದ ಪಿವಿಎಸ್‌ ಜಂಕ್ಷನ್‌ ಮತ್ತು ಆರ್‌ಟಿಒ ಕಚೇರಿ ಬಳಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದರು. ಕರ್ಕಶ ಹಾರ್ನ್ ಉಂಟು ಮಾಡುವ ಹಾರ್ನ್ ಗಳನ್ನು ಬಸ್‌ಗಳಿಂದ ಕಿತ್ತು ಹಾಕಿದರು. ಕಾರ್ಯಾಚರಣೆಯಲ್ಲಿ ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ ಅಮಾನುಲ್ಲಾ  ಮತ್ತು ಇತರ ಅಧಿಕಾರಿಗಳು ಹಾಗೂ ಸಿಬಂದಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next