Advertisement

ನೂತನ ಸ್ವಾಗತ ಗೋಪುರ ಉದ್ಘಾಟನೆ

07:21 PM Mar 14, 2021 | Team Udayavani |

ಉಡುಪಿ: ಶ್ರೀ ಬಬ್ಬುಸ್ವಾಮಿ ದೈವವು ಪರಿವಾರ ದೈವಗಳೊಂದಿಗೆ ನೆಲೆಯಾದ “ಮಣಿಪಾಲದ ಜಾಗೃತ ಸ್ಥಾನ’ ವೆಂದೇ ಪ್ರಸಿದ್ಧಿಗೊಂಡ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಮಣಿಪಾಲ
ದಲ್ಲಿ ಮಾ. 12ರಂದು ಆರಂಭ ಗೊಂಡಿದ್ದು, 14ರ ವರೆಗೆ ನೆರವೇರಲಿರುವ ಸಿರಿಸಿಂಗಾರದ ನೇಮದ ಪ್ರಯುಕ್ತ ನೂತನ ವಾಗಿ ನಿರ್ಮಿಸಲಾದ ಸ್ವಾಗತ ಗೋಪುರವನ್ನು ಮಣಿಪಾಲ ಮಾಹೆ ಟ್ರಸ್ಟಿ ವಸಂತಿ ಆರ್‌. ಪೈ ಅವರು ಶನಿವಾರ ಉದ್ಘಾಟಿಸಿ ಶುಭ ಹಾರೈಸಿದರು.

Advertisement

ದೈವಸ್ಥಾನದ ಆಡಳಿತ ಮೊಕ್ತೇಸರ ಟಿ. ಅಶೋಕ್‌ ಪೈ ಅವರ ನೇತೃತ್ವದಲ್ಲಿ ಸ್ವಾಗತ ಗೋಪುರಕ್ಕೆ ಕಲಶ ಏರಿಸಲಾಯಿತು. ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ, ಉಜ್ವಲ್‌ ಪಿ. ಶೆಟ್ಟಿ, ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಗಣ್ಯರು, ಗುರಿಕಾರರು, ಗ್ರಾಮದ ಹತ್ತು ಸಮಸ್ತರು, ಭಕ್ತರು ಭಾಗವಹಿಸಿದ್ದರು.

ಬೆಳಗ್ಗೆ ವರ್ಧಂತಿ ಆಚರಣೆ, ಮಧ್ಯಾಹ್ನ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ಭಂಡಾರ ಮೆರವಣಿಗೆ, ರಾತ್ರಿ ಶ್ರೀ ಬಬ್ಬುಸ್ವಾಮಿ ನೇಮ, ಶ್ರೀದೇವಿ ತನ್ನಿಮಾನಿಗ ನೇಮ ಜರಗಿತು. ಭಜನೆ, ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಸಮಂಜರಿ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next