Advertisement

ಕೋವಿಡ್ ಚಿಕಿತ್ಸೆಗೆ ಭಯ ಬೇಡ: ಮಹಾಂತೇಶ

05:33 PM May 20, 2021 | Team Udayavani |

ಚನ್ನಮ್ಮ ಕಿತ್ತೂರ: ಗ್ರಾಮೀಣ ಮಟ್ಟದಲ್ಲಿ ಕೊರೊನಾ ಹೆಚ್ಚಾಗಿ ಕಂಡು ಬರುತ್ತಿದ್ದು ಜನರು ಯಾವುದೇ ಭಯಪಡದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

Advertisement

ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ ಸೆಂಟರ್‌ ಉದ್ಘಾಟಿಸಿ ಮಾತನಾಡಿದ ಅವರು, ಜನರು ಭಯಪಡದೆ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಆಸ್ಪತ್ರೆಯನ್ನು ಕೊರೊನಾ ರೋಗಿಗಳಿಗೆ ಮೀಸಲಿರಿಸಿದ್ದು 20 ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಶಕುಂತಲಾ ಗಡಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ನೀಡಲಾಗುತ್ತಿದೆ.

ನೇಸರಗಿ ಭಾಗಕ್ಕೆ ನಾಗನೂರ ಆರೋಗ್ಯ ಕೇಂದ್ರದಲ್ಲಿ 20 ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯ ಆಕ್ಸಿಜನ್‌, ರೆಮ್‌ ಡೆಸಿವಿಯರ್‌ ಸೇರಿದಂತೆ ಎಲ್ಲ ಔಷಧೋಪಚಾರ ಒದಗಿಸಲಾಗಿದೆ. ಯಾರೂ ಹೆದರದೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು. ಗ್ರಾಮೀಣ ಪ್ರದೇಶದಲ್ಲಿಯೂ ಕೊರೊನಾ ಚಿಕಿತ್ಸೆ ಕೇಂದ್ರಗಳನ್ನು ತೆರೆಯುತ್ತಿದ್ದೇವೆ ಹಾಗೂ ಪ್ರತಿ ಗ್ರಾಮಗಳ ಜನತೆಯನ್ನು ತಪಾಸಣೆ ಮಾಡಿಸಿ ಬೇಕಾದ ಔಷಧಿ ಗಳನ್ನು ಒದಗಿಸುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮಾತನಾಡಿ, ಕೊರೊನಾ ಪರೀಕ್ಷೆಗೆ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಆಕ್ಸಿಮೀಟರ್‌, ಥರ್ಮಲ್‌ ಸ್ಕಾನರ್‌ ಪೂರೈಸುತ್ತೇವೆ.  ಹೋಮ ಐಸೊಲೇಷನ್‌ನಲ್ಲಿದ್ದವರು ಹುಲಿಕಟ್ಟಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೋಂಕಿತರನ್ನು ಅತ್ಯಂತ ಕಾಳಜಿಪೂರ್ವಕವಾಗಿ ನೋಡಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಔಷಧೋಪಚಾರ, ಬಿಸಿ ನೀರು, ಯೋಗ ಶಿಕ್ಷರಿಂದ ಯೋಗ ಮಾಡಿಸಬೇಕು. ಅವರಿಗೆ ಧೈರ್ಯವನ್ನು ತುಂಬುವ ವ್ಯವಸೆಯನ್ನು ಕಲ್ಪಿಸಬೇಕೆಂದು ಅಧಿ ಕಾರಿಗಳಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್‌ ಸೋಮಲಿಂಗಪ್ಪ ಹಾಲಗಿ, ಪ್ರೊಬೇಷನರಿ ತಹಶೀಲ್ದಾರ್‌ ಮಹೇಶ ಪತ್ರಿ, ತಾಲೂಕು ವೈದ್ಯಾಧಿಕಾರಿಗಳಾದ ಡಾ| ಶಿವಾನಂದ ಮಾಸ್ತಿಹೊಳಿ, ಡಾ| ಎಸ್‌ ಎಸ್‌ ಸಿದ್ದನ್ನವರ, ಬಿಜಿಪಿ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಬಿಜಿಪಿ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಪಪಂ ಅಧ್ಯಕ್ಷ ಹನುಮಂತ ಲಂಗೋಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ ವಾಳದ, ಸದಸ್ಯ ಕಿರಣ ಪಾಟೀಲ, ಇನ್ನೂ ಹಲವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next