Advertisement

ಕಾಂಗ್ರೆಸ್‌ನ ಉತ್ತಮ ನಾಯಕರಿಗೆ ಮಾತ್ರ ಬಿಜೆಪಿಯಲ್ಲಿ ಅವಕಾಶ

12:27 PM May 31, 2019 | Vishnu Das |

ನಾಗಪುರ: ಕಾಂಗ್ರೆಸ್‌ನಲ್ಲಿಯ ಉತ್ತಮ ನಾಯಕರನ್ನು ಭಾರತೀಯ ಜನತಾ ಪಕ್ಷದಲ್ಲಿ ಸೇರಿಗೊಳ್ಳಲಿದ್ದು, ಕೆಟ್ಟವರಿಗೆ ಪಕ್ಷದಲ್ಲಿ ಪ್ರವೇಶವಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಅರಣ್ಯ ಸಚಿವ ಸುಧೀರ್‌ ಮುಂಗಂತಿವಾರ್‌ ಹೇಳಿದ್ದಾರೆ.

Advertisement

ನಾಗಪುರದಲ್ಲಿ ಮುಂಗಂತಿವಾರ್‌ ಅವರು ಮಾಧ್ಯಮಗಳ ಜತೆ ಸಂವಾದ ನಡೆಸಿದರು ಕಾಂಗ್ರೆಸ್‌ ಎಂದರೆ ಅವಧಿ ಮುಕ್ತಾಯಗೊಂಡ ಔಷಧದಂತೆ ಆಗಿದೆ. ಕಾಂಗ್ರೆಸಿನಲ್ಲಿ ಸದ್ಯ ಯಾವುದೇ ಪರಿಣಾಮಕಾರಿ ಪ್ರಭಾವ ಉಳಿದಿಲ್ಲ, ಕಾಂಗ್ರೆಸ್‌ನಲ್ಲಿ ಎಣಿಕೆಯ ಕೆಲವು ಉತ್ತಮ ನಾಯಕರು ಇದ್ದಾರೆ. ಅವರು ದೇಶ ಸೇವೆ ಮಾಡುವ ಭಾವನೆಯಲ್ಲಿ ರಾಜಕೀಯಕ್ಕೆ ಬಂದಿದ್ದರು. ಅಂತಹ ನಾಯಕರಿಗೆ ಬಿಜೆಪಿಯಲ್ಲಿ ಪ್ರವೇಶ ನೀಡುವ ವಿಚಾರ ನಡೆಯುತ್ತಿದೆ. ಆದರೆ ಕಾಂಗ್ರೆಸ್‌ನಲ್ಲಿದ್ದು, ಜನರ ಹೀತ ಬಯಸದೇ ಕೆಟ್ಟ ರಾಜಕೀಯ ಮಾಡುವವರಿಗೆ ಮಾತ್ರ ಬಿಜೆಪಿಯಲ್ಲಿ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಮುಂಗಂತಿವಾರ್‌ ಹೇಳಿದ್ದಾರೆ.

ಈ ವೇಳೆ ಚಂದ್ರಾಪುರದ ಕಾಂಗ್ರೆಸ್‌ನ ಸಂಸದ ಬಾಳು ಧಾನೋರ್ಕರ್‌ ಅವರು ಚಂದ್ರಾಪುರದಲ್ಲಿ ಮದ್ಯಬಂದ್‌ ಮಾಡಿಸುವ ಬಗ್ಗೆ ನೀಡಿದ ಹೇಳಿಕೆಯ ಕುರಿತು ಮಾತನಾಡಿದ ಮುಂಗಂತಿವಾರ್‌ ಅವರು, ಇಲ್ಲಿಯ ತನಕ ಕಾಂಗ್ರೆಸ್‌ನ ಸದಸ್ಯತ್ವ ಪಡೆಯಲು ನಾನು ಮದ್ಯ ಸೇವನೆ ಮಾಡುತ್ತಿಲ್ಲ

ಹಾಗೂ ಮಾಡುವುದಿಲ್ಲ ಎಂದು ಪ್ರಮಾಣ ನೀಡಬೇಕಾಗುತ್ತಿತ್ತು. ಹಾಗೆಯೇ ಕಾಂಗ್ರೆಸ್‌ನಲ್ಲಿ ಸದಸ್ಯತ್ವ ಪಡೆಯಲು ಶುಲ್ಕ ಪಾವತಿಸ ಬೇಕಾಗುತ್ತಿತ್ತು. ಆ ಶುಲ್ಕ ಪಾವತಿಯ ಹಿಂದೆ ಮದ್ಯಪಾನ ಮಾಡಬಾರದು ಎಂಬ ಹೇಳಿಕೆಯು ಮುದ್ರಿಸಲಾಗುತ್ತಿತ್ತು. ಆದರೆ ಈಗ ಧಾನೋರ್ಕರ್‌ ಕಾಂಗ್ರೆಸ್‌ ಆ ಹಳೆಯ ಪಾವತಿಯನ್ನು ಹರಿದುಹಾಕಬೇಕಾಗಿದೆ ಮುಂಗಂತಿವಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next