Advertisement

ಕತ್ತಿ ನಿಧನಕ್ಕೆ ಒಂದು ದಿನ ಮಾತ್ರ ಶೋಕಾಚರಣೆ: ಎಂ.ಬಿ.ಪಾಟೀಲ್ ಅಸಮಾಧಾನ

03:09 PM Sep 07, 2022 | Vishnudas Patil |

ಬೆಂಗಳೂರು: ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ಒಂದು ದಿನ ಮಾತ್ರ ಶೋಕಾಚರಣೆ ಮಾಡುವ ಸರ್ಕಾರದ ನಡೆಗೆ ಕಾಂಗ್ರೆಸ್ ನಾಯಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಜನೋತ್ಸವಕ್ಕಿಂತ ಉಮೇಶ್ ಕತ್ತಿಯವರು ಬಹಳ ಮಹತ್ವ, ಶೋಕಾಚರಣೆ ಮಾಡುವ ವಿಚಾರದಲ್ಲಿಶಿಷ್ಟಾಚಾರ ಉಲ್ಲಂಘನೆಯಾಗಬಾರದು,ಹಾಗೊಂದು ವೇಳೆ ಉಲ್ಲಂಘನೆಯಾಗಿದ್ದರೇ ತಪ್ಪು. ಇಲ್ಲಿಯವರಿಗೆ ಎಲ್ಲರಿಗೂ ಕೊಟ್ಟ ಗೌರವ ಉಮೇಶ್ ಕತ್ತಿ ಅವರಿಗೂ ಕೊಡಬೇಕು. ಒಂದು ವೇಳೆ ಆ ರೀತಿಯಾಗಿದ್ದರೇ  ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

ಇಂತಹ ಘಟನೆಯಾದಾಗ ಹಿಂದಿನ ಪದ್ಧತಿಗಳೇ ಆಗಬೇಕು. ನಾನು ಇದರಲ್ಲಿ ರಾಜಕಾರಣ‌ ಮಾತನಾಡುವುದಿಲ್ಲ. ತಪ್ಪಾಗಿದ್ದರೆ ಸರ್ಕಾರ ಸರಿಪಡಿಸಿಕೊಳ್ಳಬೇಕು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

ದೊಡ್ಡ ಬಳ್ಳಾಪುರದಲ್ಲಿ ಸರಕಾರ ನಾಳೆ (ಸೆ. 08) ಬೃಹತ್ ಜನೋತ್ಸವ ಸಮಾವೇಶಕ್ಕೆ ಸಿದ್ಧತೆ ನಡೆಸಲಾಗಿದ್ದು, ಭಾನುವಾರಕ್ಕೆ ಮುಂದೂಡಿಕೆಯಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next