Advertisement

ಮೋದಿ ಬೆಳೆಸಿದ್ದು ಗಡ್ಡ ಮಾತ್ರ, ಸಾಧನೆ ಶೂನ್ಯ : ಮೋದಿ ವಿರುದ್ಧ ಮಮತಾ ಕಿಡಿ  

05:52 PM Mar 26, 2021 | Team Udayavani |

ಕೋಲ್ಕತ್ತಾ : ಚುನಾವಣೆಗೆ ಇನ್ನು ಕೆಲವೇ ಕೆಲವು ಗಂಟೆಗಳು ಬಾಕಿ ಇರುವಾಗ ತೃಣ ಮೂಲ ಕಾಂಗ್ರೆಸ್ ನ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದ್ದಾರೆ.

Advertisement

ಒಂದು ದಂಗೆಕೋರ, ಇನ್ನೊಂದು ಪ್ರಾಯೋಜಕತ್ವ ದಂಗೆ ಹಾಗೂ ಮತ್ತೊಂದು…ಯಾವುದೇ ಕೈಗಾರಿಕೋದ್ಯಮಗಳನ್ನು ಅಭಿವೃದ್ಧಿ ಮಾಡದೇ, ಕೇವಲ ತಮ್ಮ ಗಡ್ಡ ಮಾತ್ರ ಬೆಳಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಬ್ಯಾನರ್ಜಿ ಸಿಡಿದಿದ್ದಾರೆ.

ಓದಿ :  ಅಸ್ಸಾಂ :  ಬುದ್ಧಿವಂತಿಕೆಯಿಂದ ಮತವನ್ನು ಚಲಾಯಿಸಿ : ಮನಮೋಹನ್ ಸಿಂಗ್

ಒಮ್ಮೊಮ್ಮೆ ತನ್ನನ್ನು ತಾನೇ ಗಾಂಧಿಜಿಗಿಂತ, ರವಿಂದ್ರನಾಥ್ ಠಾಕೂರ್ ಅವರಿಗಿಂತ ಮೇಲು ಅಂತಂದುಕೊಳ್ಳುತ್ತಾರೆ. ಒಮ್ಮೊಮ್ಮೆ ತಮ್ಮನ್ನು ತಾವೇ ಸ್ವಾಮಿ ವಿವೇಕಾನಂದರೆಂದು ಕರೆದುಕೊಳ್ಳುತ್ತಾರೆ. ತಮ್ಮ ಹೆಸರನ್ನೇ ಸ್ಟೇಡಿಯಂ ಗೆ ಇಟ್ಟುಕೊಳ್ಳುತ್ತಾರೆ. ಒಂದು ದಿನ ಇಡೀ ದೇಶವನ್ನು ಮಾರಿ ದೇಶಕ್ಕೆ ತನ್ನ ಹೆಸರನ್ನೇ ಇಡುತ್ತಾರೆ. ಅವರಿಗೆ ಏನೋ ಆಗಿರಬಹುದು ಎಂದು ಗುಡುಗಿದ್ದಾರೆ.

ಇನ್ನು, ಕೋವಿಡ್ ವ್ಯಾಕ್ಸಿನೆಶನ್ ಪ್ರಮಾಣ ಪತ್ರಕ್ಕೆ ತಮ್ಮ ಫೋಟೋವನ್ನು ಹಾಕಿಸಿಕೊಳ್ಳುತ್ತಾರೆ. ಇಸ್ರೋ ಬಾಹ್ಯಾಕಾಶ ಸಂಸ್ಥೆಯಿಂದ ತನ್ನ ಫೋಟೋವನ್ನು ಬಾಹ್ಯಾಕಾಶಕ್ಕೆ ಕಳುಹಿಸುವಂತೆ ಮಾಡುತ್ತಾರೆ. ಅವರ ಹೆಸರನ್ನು ದೇಶಕ್ಕೆ ಇಡುವ ದಿನ ಬರುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Advertisement

ಓದಿ : ಕೇರಳ : ಸ್ಪರ್ಧಾಕಣದಲ್ಲಿ ಕುಟುಂಬ ರಾಜಕಾರಣ..!

Advertisement

Udayavani is now on Telegram. Click here to join our channel and stay updated with the latest news.

Next