Advertisement

ಡಿಎಸ್‌ಪಿ ದೇವೀಂದರ್‌ ಸಿಂಗ್‌ ಪ್ರಕರಣ : ಮರುತನಿಖೆಗೆ ಆಗ್ರಹ

10:07 AM Jan 18, 2020 | Team Udayavani |

ಹೊಸದಿಲ್ಲಿ: ಹಿಜ್ಬುಲ್‌ ಉಗ್ರರ ಜತೆ ಸಿಕ್ಕಿಬಿದ್ದ ಡಿಎಸ್‌ಪಿ ದೇವೀಂದರ್‌ ಸಿಂಗ್‌ ಪ್ರಕರಣದ ಕುರಿತು 6 ತಿಂಗಳೊಳಗೆ ನ್ಯಾಯಯುತ ತನಿಖೆಯಾಗಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. ಜತೆಗೆ, ಕಳೆದ ವರ್ಷದ ಪುಲ್ವಾಮಾ ದಾಳಿ ಪ್ರಕರಣದ ಮರು ತನಿಖೆಗೂ ಪಕ್ಷ ಆಗ್ರಹಿಸಿದೆ.

Advertisement

ಇನ್ನೊಂದೆಡೆ, ಈ ಪ್ರಕರಣವನ್ನು ಎನ್‌ಐಎಗೆ ವಹಿಸಿರುವ ಬಗ್ಗೆ ಟೀಕಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ದೇವೀಂದರ್‌ ಸಿಂಗ್‌ರನ್ನು ಮೌನವಾಗಿಸುವ ಉದ್ದೇಶದಿಂದಲೇ ಈ ಕೇಸನ್ನು ಎನ್‌ಐಎ ತನಿಖೆಗೆ ಒಪ್ಪಿಸಲಾಗಿದೆ. ಎನ್‌ಐಎ ಮುಖ್ಯಸ್ಥ ವೈ.ಸಿ.ಮೋದಿ ಅವರ ನೇತೃತ್ವದಲ್ಲಿ ಈ ಕೇಸನ್ನು ಮುಚ್ಚಿಹಾಕುವ ಯತ್ನ ನಡೆದಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next