Advertisement

ಆನ್‌ಲೈನ್ ಗೇಮ್‌ ಚಟ: ಯುವಕ ಆತ್ಮಹತ್ಯೆ

10:08 PM Jul 01, 2023 | Team Udayavani |

ಶಿರಸಿ: ಆನ್ ಲೈನ್ ಗೇಮ್ ಚಟದ ದಾಸನಾಗಿದ್ದ ಯುವಕನೋರ್ವ ಲಕ್ಷಾಂತರ ರೂ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ತಾಲೂಕಿನ ಕುಳವೆ ಬಳಿ ನಡೆದಿದೆ.

Advertisement

ವಿಜೇತ ಶಾಂತಾರಾಮ ಹೆಗಡೆ (37) ಮೃತ ಯುವಕ. ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಇದರ ಮಧ್ಯೆ ಮೊಬೈಲ್ ನಲ್ಲಿ ಆನ್ ಲೈನ್ ಗೇಮ್ ಆಡುವ ಚಟಕ್ಕೆ ಬಿದ್ದವನು ಲಕ್ಷಾಂತರ ರೂಪಾಯಿ‌ ಕಳೆದುಕೊಂಡಿದ್ದ ಎನ್ನಲಾಗಿದೆ. ಶುಕ್ರವಾರ ತನ್ನ ಊರಾದ ಕುಳವೆಯಿಂದ ಬೆಂಗಳೂರಿಗೆ ಹೋಗುತ್ತೇನೆ ಎಂದು ಬಂದವನು, ಬೆಂಗಳೂರಿಗೆ ಹೋದರೆ ಸಾಲಗಾರರು ಗಂಟು ಬೀಳುತ್ತಾರೆ ಎಂದು ಸಮೀಪದ ಅರಣ್ಯ ಪ್ರದೇಶದಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:  Viral Video; ಹಸಿದ ಸಿಂಹದ ಬಾಯಿಯಿಂದ ಗೋವನ್ನು ರಕ್ಷಿಸಿದ ಧೈರ್ಯಶಾಲಿ ರೈತ !

Advertisement

Udayavani is now on Telegram. Click here to join our channel and stay updated with the latest news.

Next