Advertisement

750 ಕೆಜಿ ಈರುಳ್ಳಿಗೆ 1,064 ರೂ:ವರದಿಗೆ ಕೇಂದ್ರ ಸೂಚನೆ

10:10 AM Dec 05, 2018 | Harsha Rao |

ಮುಂಬಯಿ: ರೈತನಿಗೆ ಮಾರುಕಟ್ಟೆಯಲ್ಲಿ 750 ಕೆಜಿ ಈರುಳ್ಳಿಗೆ 1,064 ರೂ. ಸಿಕ್ಕಿದೆ ಎಂಬ ಪ್ರಕರಣದ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಕೇಂದ್ರ ಸರಕಾರ ಸೂಚಿಸಿದೆ. ನಾಸಿಕ್‌ ಜಿಲ್ಲೆಯ ನಿಫಾಡ್‌ ತಾಲೂಕಿನ ಸಂಜಯ ಸಾಠೆ ಎಂಬ ರೈತನಿಗೆ 750 ಕೆಜಿ ಈರುಳ್ಳಿ ಮಾರಾಟ ಮಾಡಿ, 1,064 ರೂ. ಸಿಕ್ಕಿತ್ತು. ಇದರಿಂದ ನೊಂದ ಅವರು, ಅದನ್ನು ಪ್ರಧಾನಿಯವರ ವಿಪತ್ತು ಪರಿಹಾರ ನಿಧಿಗೆ ಕಳುಹಿಸಿದ್ದಾಗಿ ಹೇಳಿಕೊಂಡದ್ದು ಸುದ್ದಿಯಾಗಿತ್ತು.

Advertisement

ನಾಸಿಕ್‌ ಪ್ರದೇಶದಲ್ಲಿ ಪ್ರಸಕ್ತ ಸಾಲಿನಲ್ಲಿ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ ಎಂಬ ಅಂಶ ಸೇರಿದಂತೆ ಹಲವು ಅಂಶಗಳನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದು ಹಂಗಾಮಿ ಡಿ.ಸಿ.ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next