Advertisement

Hindu ಎಂದರೆ ಧಾರ್ಮಿಕ ನಂಬಿಕೆ, ಜಾತಿ ಲೆಕ್ಕಿಸದೆ ಉದಾರತೆ, ಸದ್ಭಾವನೆ ಇರುವವರು

07:47 PM Sep 15, 2024 | Team Udayavani |

ಜೈಪುರ: ”ಹಿಂದೂ ಆಗಿರುವುದು ಎಂದರೆ ಧಾರ್ಮಿಕ ನಂಬಿಕೆಗಳು, ಜಾತಿ ಅಥವಾ ಆಹಾರ ಪದ್ಧತಿಗಳನ್ನು ಲೆಕ್ಕಿಸದೆ ಎಲ್ಲರಿಗೂ ಉದಾರತೆ ಮತ್ತು ಸದ್ಭಾವನೆಯನ್ನು ತೋರಿಸುವುದಾಗಿದೆ” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ(ಸೆ15) ಹೇಳಿದ್ದಾರೆ.

Advertisement

“ಈ ರಾಷ್ಟ್ರದಲ್ಲಿ ಏನಾದರೂ ತಪ್ಪಾದರೆ, ಅದು ಹಿಂದೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಅದು ರಾಷ್ಟ್ರದ ಕರ್ತೃ- ಧಾರ್ತೃವಾಗಿದೆ ಆದರೆ ದೇಶದಲ್ಲಿ ಏನಾದರೂ ಒಳ್ಳೆಯದು ನಡೆದರೆ ಅದು ಹಿಂದೂಗಳ ಕೀರ್ತಿಯನ್ನು ಹೆಚ್ಚಿಸುತ್ತದೆ” ಎಂದರು.

ಸಾಮಾನ್ಯವಾಗಿ ಹಿಂದೂ ಧರ್ಮ ಎಂದು ಉಲ್ಲೇಖಿಸಲ್ಪಡುವುದು ಮೂಲಭೂತವಾಗಿ, ಸಾರ್ವತ್ರಿಕ ಮಾನವ ಧರ್ಮವಾಗಿದೆ. ಅದು ಪ್ರತಿಯೊಬ್ಬರ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಿದ ಜಾಗತಿಕ ನೀತಿಯನ್ನು ಒಳಗೊಂಡಿರುತ್ತದೆ. ಹಿಂದೂ ಆಗಬೇಕೆಂದರೆ ಜಗತ್ತಿನಲ್ಲೇ ಅತ್ಯಂತ ಉದಾರ ವ್ಯಕ್ತಿಯಾಗಬೇಕು, ಎಲ್ಲರನ್ನೂ ಒಳಗೊಳ್ಳುವವನು, ಎಲ್ಲರ ಬಗ್ಗೆ ಸದ್ಭಾವನೆಯನ್ನು ತೋರಿಸುವವನು ಮತ್ತು ಉದಾತ್ತ ಪೂರ್ವಜರಿಂದ ಬಂದವನು. ಅಂತಹ ವ್ಯಕ್ತಿಯು ಶಿಕ್ಷಣವನ್ನು ಅಪಶ್ರುತಿಯನ್ನು ಬಿತ್ತಲು ಬಳಸುವುದಿಲ್ಲ. ಬುದ್ಧಿವಂತಿಕೆಯನ್ನು ಹಂಚಿಕೊಳ್ಳುತ್ತಾನೆ, ಸಂಪತ್ತನ್ನು ಭೋಗಕ್ಕಾಗಿ ಬಳಸುವುದಿಲ್ಲ ಬದಲಾಗಿ ದಾನಕ್ಕಾಗಿ ಬಳಸುತ್ತಾನೆ. ದುರ್ಬಲರನ್ನು ರಕ್ಷಿಸಲು ಶಕ್ತಿಯನ್ನು ಬಳಸಿಕೊಳ್ಳುತ್ತಾನೆ” ಎಂದು ಭಾಗವತ್ ಹೇಳಿದ್ದಾರೆ.

ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕೌಟುಂಬಿಕ ಮೌಲ್ಯಗಳು, ಸ್ವಯಂ ಅರಿವು ಮತ್ತು ನಾಗರಿಕ ಶಿಸ್ತು ಎಂಬ ಐದು ಪ್ರಮುಖ ತತ್ವಗಳನ್ನು ಸಾಕಾರಗೊಳಿಸಲು ಮತ್ತು ಉತ್ತೇಜಿಸಲು ಆರ್‌ಎಸ್‌ಎಸ್ ಸ್ವಯಂಸೇವಕರಿಗೆ ಭಾಗವತ್ ಕರೆ ನೀಡಿದರು.

”ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರಲು ಸಾಮಾಜಿಕ ಜಾಲತಾಣಗಳ ದುರ್ಬಳಕೆಯೇ ಕಾರಣ ಎಂದು ಆರೋಪಿಸಿದರು.ಅದು ಯುವ ಪೀಳಿಗೆಯು ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ತ್ವರಿತವಾಗಿ ಸಂಪರ್ಕವನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ” ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next