Advertisement

ಖಾಸಗಿ ಬಸ್‌ಗಳ ಏಕಮುಖ ಸಂಚಾರ : ಜಿಲ್ಲಾಧಿಕಾರಿ ಪರಿವೀಕ್ಷಣೆ

02:15 AM Jul 07, 2019 | sudhir |

ಮಡಿಕೇರಿ:ಮಡಿಕೇರಿ ನಗರದಲ್ಲಿ ನೂತನ ಖಾಸಗಿ ಬಸ್‌ ನಿಲ್ದಾಣ ನಿರ್ಮಾಣಗೊಂಡು ವರ್ಷವೇ ಕಳೆದಿದ್ದರೂ ಖಾಸಗಿ ಬಸ್‌ಗಳ ನಿಲುಗಡೆಗೆ ಮಾತ್ರ ಕಾಲ ಕೂಡಿ ಬಂದಿಲ್ಲ. ಕಾರಣ ಬಸ್‌ಗಳ ಸಂಚಾರಕ್ಕೆ ಮಾರ್ಗ ಗುರುತಿಸದೆ ಇರುವುದು. ಇದರಿಂದ ಬಸ್‌ ಮಾಲೀಕರು ಹಾಗೂ ಸಿಬಂದಿಗಳು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು, ಅಲ್ಲದೆ ಪ್ರಯಾಣಿಕರು ಕೂಡ ಗೊಂದಲದಲ್ಲಿದ್ದರು.

Advertisement

ಹಳೆಯ ಖಾಸಗಿ ಬಸ್‌ ನಿಲ್ದಾಣವನ್ನೇ ಅವಲಂಬಿಸಿರುವ ಪ್ರಯಾಣಿಕರು ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ನಗರದಲ್ಲಿ ಖಾಸಗಿ ಬಸ್‌ಗಳ ಏಕಮುಖ ಸಂಚಾರ ಜಾರಿಗೊಳಿಸುವ ಬಗ್ಗೆ ಪರಿವೀಕ್ಷಣೆ ನಡೆಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪನ್ನೇಕರ್‌, ಪೌರಾಯುಕ್ತ‌ ಎಂ.ಎಲ್.ರಮೇಶ್‌, ಪ್ರಾದೇಶಿಕ ಸಾರಿಗೆ ಕಚೇರಿ ವ್ಯವಸ್ಥಾಪಕ ಶಿವಣ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next